Advertisement

Sirsi: ಹಿರಿಯ ಸಹಕಾರಿ, TSS ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ನಿಧನ

05:34 PM Jan 31, 2024 | Team Udayavani |

ಶಿರಸಿ: ಹಿರಿಯ ಸಹಕಾರಿ, ಟಿಎಸ್‌ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ (75) ಬುಧವಾರ ಮಧ್ಯಾಹ್ನ ನಿಧನರಾದರು. ಕಳೆದ ಅನೇಕ ತಿಂಗಳಿಂದ ಅನಾರೋಗ್ಯದಲ್ಲಿದ್ದ ಅವರು ಸಾಮ್ರಾಟ್ ಅತಿಥಿ ಗೃಹದಲ್ಲಿ‌ ಕೊನೆಯುಸಿರೆಳೆದರು. ಈ‌ ಮೂಲಕ ಸಹಕಾರಿ ಕ್ಷೇತ್ರದ ಹಳೆಯ ಕೊಂಡಿಯೊಂದು ಕಳಚಿದಂತಾಗಿದೆ.

Advertisement

ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ, ಕೆಡಿಸಿಸಿ ಬ್ಯಾಂಕ್, ಟಿಎಸ್ಎಸ್ ಅಧ್ಯಕ್ಷರಾಗಿ, ಸ್ವರ್ಣವಲ್ಲೀ ಮಹಾ ಸಂಸ್ಥಾನದ ಉಪಾಧ್ಯಕ್ಷರಾಗಿ, ಎಂಇಎಸ್ ಆಡಳಿತ ಮಂಡಳಿ ಅಧ್ಯಕ್ಷರಾಗಿಯೂ ಕೆಲಸ‌ ಮಾಡಿದ್ದರು. ರಾಜ್ಯ ಸರಕಾರದ ಸಹಕಾರಿ‌ ರತ್ನ‌ ಸೇರಿದಂತೆ‌ ಅನೇಕ‌ ಪ್ರಶಸ್ತಿ ಬಂದಿದ್ದವು. ಮೃತರು ಪುತ್ರ ಶಶಾಂಕ, ಪುತ್ರಿ, ಪತ್ನಿ, ಅಪಾರ ಬಂಧು ಬಳಗ ಅಗಲಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ನಗರದ ಅನೇಕ‌ ಸಹಕಾರಿ ಸಂಸ್ಥೆಗಳಿಗೆ‌ ಮೃತರ ಗೌರವಾರ್ಥ ರಜೆ ಘೋಷಿಸಲಾಯಿತು.

ಇದನ್ನೂ ಓದಿBelagavi; 31 ತಾಲೂಕುಗಳಲ್ಲಿ ವಾರದೊಳಗೆ ಭೂ ಸುರಕ್ಷಾ ಯೋಜನೆ ಜಾರಿ: ಕೃಷ್ಣ ಬೈರೇಗೌಡ

Advertisement

Udayavani is now on Telegram. Click here to join our channel and stay updated with the latest news.

Next