Advertisement

Sirsi: ಜೀವಂತ ನಾಗರ ಹಾವಿಗೆ ಹಾಲೆರೆದು ಪೂಜೆ ಸಲ್ಲಿಸಿದ ಉರಗ ತಜ್ಞ !

02:56 PM Aug 09, 2024 | Team Udayavani |

ಶಿರಸಿ: ನಗರದ ಹೊರ ವಲಯದ ಚಿಪಗಿ‌ ನಿವಾಸಿ, ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರು‌ ನಾಗರ ಪಂಚಮಿ‌ ದಿನದಂದು ಮನೆ ಸಮೀಪ ಬಂದಿದ್ದ ಜೀವಂತ ನಾಗರ ಹಾವಿಗೆ ಪೂಜೆ ಸಲ್ಲಿಸಿ‌ ಕಾಡಿನಲ್ಲಿ ಬೀಳ್ಕೊಟ್ಟರು.

Advertisement

ಸಾಮಾನ್ಯವಾಗಿ ನಾಗರ ಪಂಚಮಿ‌ ದಿನದಂದು ನಾಗವನದಲ್ಲಿನ ನಾಗರ‌ಕಲ್ಲಿಗೆ, ಹುತ್ತಕ್ಕೆ ಪೂಜಿಸುವುದು ವಾಡಿಕೆ. ಆದರೆ, ಪ್ರಶಾಂತ ಹಾಗೂ ಅವರ ಇಡೀ‌ ಕುಟಂಬ ನಾಗರ ಹಾವಿಗೆ ಹೂವು ಹಾಕಿ ಹಾಲೆರೆದರು.

ಹಾವನ್ನು‌ ಕಂಡಲ್ಲಿ ಕೊಲ್ಲಬಾರದು. ಅವುಗಳು ಪರಿಸರದ ಅತ್ಯಂತ ‌ಪ್ರಮುಖ ಪಾತ್ರಧಾರಿ. ಅವುಗಳ ರಕ್ಷಣೆ, ಜಾಗೃತಿ ಹಿನ್ನಲೆ ಈ ಪೂಜೆ ಎಂದು ಪ್ರಶಾಂತ ತಿಳಿಸಿದರು.

ಪ್ರಶಾಂತ ಅವರ ತಂದೆ ಸುರೇಶ ಹುಲೇಕಲ್ ಅವರೆಲ್ಲ ಮನೆಗೆ, ತೋಟಕ್ಕೆ‌ ಬಂದಿದ್ದ ಕಾಳಿಂಗ ಸರ್ಪದ ತನಕ ಸಾವಿರಾರು ಉರಗಗಳನ್ನು ಹಿಡಿದು‌ ಕಾಡಿಗೆ ಬಿಟ್ಟು ಜೀವದಾನ ಮಾಡಿದ ಕುಟುಂಬ.

Advertisement

Udayavani is now on Telegram. Click here to join our channel and stay updated with the latest news.

Next