Advertisement

Sirsi; ‘ಲಕ್ಷವೃಕ್ಷ’ ಅಭಿಯಾನದ ಕುರಿತು ಸಿಎಂಗೆ ರವೀಂದ್ರ ನಾಯ್ಕ ಮಾಹಿತಿ

05:53 PM Sep 01, 2023 | Team Udayavani |

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡ ‘ಲಕ್ಷವೃಕ್ಷ’ ಗಿಡ ನೆಡುವ ಅಭಿಯಾನದ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಶುಕ್ರವಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಿದರು.

Advertisement

ಅರಣ್ಯ ಸಾಂದ್ರತೆ ಹೆಚ್ಚಿಸುವ ಮತ್ತು ಅರಣ್ಯವಾಸಿಗಳಿಗೆ ಪರಿಸರ ಜಾಗೃತೆ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮವನ್ನ ಛಾಯಾಚಿತ್ರಗಳ ಮೂಲಕ ವಿಶ್ಲೇಷಿಸಿದಾಗ ಮುಖ್ಯಮಂತ್ರಿಗಳು ಅರಣ್ಯವಾಸಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜುಲೈ 31 ರಂದು ಪ್ರಾರಂಭವಾದ ಲಕ್ಷವೃಕ್ಷಗಿಡ ನೆಡುವ ಅಭಿಯಾನ ಅಗಸ್ಟ್ 20 ರವರೆಗೆ 167 ಗ್ರಾಮ ಪಂಚಾಯತ ವ್ಯಾಪ್ತಿಯ, 803 ಹಳ್ಳಿಗಳಲ್ಲಿ ಸುಮಾರು ೪೧ ಸಾವಿರ ಅರಣ್ಯವಾಸಿಗಳ ಕುಟುಂಬಗಳು ಗಿಡ ನೆಡುವ ಕಾರ್ಯದಲ್ಲಿ ಸಕ್ರೀಯವಾಗಿರುವ ಅಭಿಯಾನದ ವಿಶೇಷತೆಯನ್ನ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ರವೀಂದ್ರ ನಾಯ್ಕ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next