Advertisement

Sirsi: ‘ಉದಯವಾಣಿ’ಯ ರಾಘವೇಂದ್ರ‌ ಬೆಟ್ಟಕೊಪ್ಪಗೆ ಮಾಧ್ಯಮ ಶ್ರೀ ಪ್ರಶಸ್ತಿ

03:24 PM Jul 09, 2024 | Team Udayavani |

ಶಿರಸಿ: ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಮಾಧ್ಯಮ ಶ್ರೀ ಪ್ರಶಸ್ತಿಗೆ  ಹಿರಿಯ ಪತ್ರಕರ್ತ ಹಾಗೂ ಉದಯವಾಣಿ ವರದಿಗಾರ ರಾಘವೇಂದ್ರ ಬೆಟ್ಟಕೊಪ್ಪ ಆಯ್ಕೆ ಆಗಿದ್ದಾರೆ.

Advertisement

ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ತಾಲೂಕು ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಈ ತಿರ್ಮಾನ  ಕೈಗೊಳ್ಳಲಾಗಿದೆ.

ಕಳೆದ 23 ವರ್ಷದಿಂದ ನಿರಂತರ ಪತ್ರಿಕೋದ್ಯಮದಲ್ಲಿ ಉಪ ಸಂಪಾದಕ, ವರದಿಗಾರನಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಬೆಟ್ಟಕೊಪ್ಪ 1995-96ರ ಹೈಸ್ಕೂಲ್ ವಿದ್ಯಾರ್ಥಿ ಜೀವನದ ವೇಳೆಗೆ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ನುಡಿಚಿತ್ರ ಬರೆದು ಗಮನ ಸೆಳೆದಿದ್ದರು.

ಸ್ಥಳೀಯವಾಗಿ‌ ಜನಮಾಧ್ಯಮ ಹಾಗೂ ಧ್ಯೇಯನಿಷ್ಠ ಪತ್ರಕರ್ತ, ಲೋಕಧ್ವನಿ ಪತ್ರಿಕೆಗಳಿಗೆ ವರದಿ, ಅಂಕಣ ಬರಹ ನೀಡುತ್ತಿದ್ದರು. 2001 ರಿಂದ ವಿಜಯ ಕರ್ನಾಟಕ, ಈ ಟಿವಿ, ಕನ್ನಡ ಜನಾಂತರಂಗ, ಉಷಾಕಿರಣದಲ್ಲಿ‌ ಕೆಲಸ ನಿರ್ವಹಿಸಿದ್ದ ಬೆಟ್ಟಕೊಪ್ಪ ಕಳೆದ 17 ವರ್ಷಗಳಿಂದ ಶಿರಸಿ ವರದಿಗಾರರರಾಗಿ ಉದಯವಾಣಿ ಸಂಸ್ಥೆಗೆ‌ ಕೆಲಸ ಮಾಡುತ್ತಿದ್ದಾರೆ.

ಸಾಂಸ್ಕೃತಿಕ, ಸಾಹಿತ್ಯ, ಕೃಷಿ, ಗ್ರಾಮೀಣಾಭಿವೃದ್ದಿ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಈಗಾಗಲೇ ಮೂರು ಕೃತಿಗಳನ್ನೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಇವರ ಬರಹಗಳಿಗೆ ನಾಲ್ಕು ಸಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ‌ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ನುಡಿಚಿತ್ರ ಪ್ರಶಸ್ತಿ, ಜಿಲ್ಲಾ ಪತ್ರಿಕಾ ಸಂಘ ನೀಡುವ  ಅಜ್ಜೀಬಳ ಹೆಗಡೆ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಎರಡು‌ ಸಲ‌ ಪ್ರಕಟಗೊಂಡಿದೆ  ಎಂದು ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next