Advertisement

Sirsi: ಬಾವಿಗೆ ಬಿದ್ದು ಮೃತಪಟ್ಟ ಚಿರತೆ

05:54 PM Feb 25, 2024 | Team Udayavani |

ಶಿರಸಿ: ತಾಲೂಕಿನ ಹುಲೇಕಲ್ ಅರಣ್ಯ ವಲಯದ ಸಾಲ್ಕಣಿ ಗ್ರಾಮದ ತೋಟದ ಬಾವಿಯಲ್ಲಿ ಆಕಸ್ಮಿಕವಾಗಿ ಚಿರತೆಯೊಂದು ಬಿದ್ದು ಮೃತಪಟ್ಟಿದೆ.

Advertisement

ಸಾಲ್ಕಣಿ ಗ್ರಾಮದ ರಾಮಚಂದ್ರ ಗಣಪತಿ ಹೆಗಡೆ ಎಂಬುವವರಿಗೆ ಸೇರಿದ ಮಾಲ್ಕಿ ಜಮೀನಿನಲ್ಲಿರುವ ತೋಟದ ಬಾವಿಯಲ್ಲಿ ಸುಮಾರು 3 ವರ್ಷದ ಚಿರತೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಮಾರ್ಗದರ್ಶನದಲ್ಲಿ ಬಾವಿಯಿಂದ ಚಿರತೆ ಹೊರ ತೆಗೆಯಲಾಯಿತು. ಜಾನ್ಮನೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಜಿ.ಪ್ರಕಾಶ ಸಮ್ಮುಖದಲ್ಲಿ ಭೈರುಂಬೆ ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.

ಈ ಸಂದರ್ಭದಲ್ಲಿ ಹುಲೇಕಲ್ ಆರ್‌ಎಫ್‌ಓ ಉಷಾ ಕಬ್ಬೇರ, ಉಪ ವಲಯಾರಣ್ಯಾಧಿಕಾರಿ ರವಿ.ಎಸ್, ಗಸ್ತು ಅರಣ್ಯ ಪಾಲಕರಾದ ವೀರಣ್ಣ ಯಲಿಗಾರ, ಸಂತೋಷ ಕುಮಾರ.ಆರ್, ಗ್ರಾಪಂ ಸದಸ್ಯರಾದ ಟಿ.ಎಂ.ಹೆಗೆಡೆ ಕಡಬಾಳ, ಗಜಾನನ ನಾಯ್ಕ ಸಾಲ್ಕಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next