Advertisement

ಕೆಲಸದ ಜತೆಗೆ ಆರೋಗ್ಯದತ್ತ ಗಮನವಿರಲಿ: ಹಂಪಯ್ಯ

06:28 PM May 03, 2020 | Naveen |

ಸಿರವಾರ: ದಿನನಿತ್ಯ ಪಟ್ಟಣದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದು ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

Advertisement

ಕಾರ್ಮಿಕರ ದಿನಾಚರಣೆ ಅಂಗವಾಗಿ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಮುಗಿದ ಕೂಡಲೇ ತಮ್ಮ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಆರೋಗ್ಯ ಸಮಸ್ಯೆ ನಿರ್ಲಕ್ಷಿಸಬಾರದು. ಆರೋಗ್ಯದಲ್ಲಿ ಏನೇ ಸಮಸ್ಯೆಗಳು ಬಂದರೂ ಕೂಡಲೇ ಚಿಕಿತ್ಸೆ ಪಡೆಯಬೇಕು. ಕೊರೊನಾದಿಂದಾಗಿ ಅನೇಕರು ತಮ್ಮ ಕೆಲಸ ನಿಲ್ಲಿಸಿದರೂ ಕಾರ್ಮಿಕರು ನಿರಂತರ ದುಡಿಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಪಟ್ಟಣ ಪಂಚಾಯತಿ ಮುಖ್ಯಾಧಿ ಕಾರಿ ಕೆ. ಮುನಿಸ್ವಾಮಿ, ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ಶಿವಾಜಿರಾವ್‌ ದರ್ಶನಕರ್‌, ಕಲ್ಲೂರು ಬಸವರಾಜ, ದೇವಣ್ಣ ನವಲಕಲ್ಲು, ದಾನನಗೌಡ, ಶರಣಯ್ಯ ಗುಡದಿನ್ನಿ, ರಮೇಶ ದರ್ಶನಕರ್‌, ಶಿವಶರಣ ಅರಕೇರಿ, ಎಚ್‌.ಕೆ. ಅಮರೇಶ, ಎನ್‌. ಚಂದ್ರಶೇಖರ, ಮೌಲಾಸಾಬ್‌ ವರ್ಚಸ್‌, ನಾಗಪ್ಪ ಪತ್ತಾರ, ಪಟ್ಟಣ ಪಂಚಾಯತಿ ಸದಸ್ಯರು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next