Advertisement

ಕೋವಿಡ್ ಕಾಟ : ದೋಣಿಯಲ್ಲೇ ಗಾಯಕನ ಸೆಲ್ಫ್ ಕ್ವಾರೆಂಟೈನ್

04:38 PM Apr 04, 2020 | Team Udayavani |

ಕೋಲ್ಕತಾ: ಕೋವಿಡ್ 19 ವೈರಸ್ ಕಾಟದಿಂದಾಗಿ ಮನೆಗಳಲ್ಲೋ, ಆಸ್ಪತ್ರೆಗಳಲ್ಲೋ ಇರುವಂತಾಗಿದೆ. ಆದರೆ, ಪಶ್ಚಿಮ ಬಂಗಾಳದ ಹಿರಿಯ ಗಾಯಕರೊಬ್ಬರು ಲಾಕ್‌ ಡೌನ್‌ ಆಗಿರುವುದರಿಂದ ದೋಣಿಯನ್ನೇ ಪ್ರತ್ಯೇಕ ಮನೆಯನ್ನಾಗಿಸಿಕೊಂಡಿದ್ದಾರೆ.

Advertisement

ನಬದ್ವೀಪ್‌ನ ನಿರಂಜನ್‌ ಹಾಲ್ದಾ‍ ಎಂಬ ಗಾಯಕ, ಕಳೆದ ವಾರ ಸೋದರನ ಮನೆಗೆ ಹೋಗಿದ್ದರು. ಸುತ್ತಮುತ್ತ ಹಳ್ಳಿಗಳಲ್ಲಿ ಭಕ್ತಿಗೀತೆ ಕಾರ್ಯಕ್ರಮ ನೀಡುತ್ತಿರುವಾಗ ಪ್ರಧಾನಿ ಮೋದಿ ಅವರು 21 ದಿನಗಳ ಲಾಕ್‌ ಡೌನ್‌ ಘೋಷಣೆ ಮಾಡಿದರು. ಸೋದರನ ಮನೆಯಲ್ಲಿ ಜಾಗ ಇಲ್ಲದೆ ಕಾರಣ, ಸ್ಥಳೀಯ ಮುಖಂಡ ತಪನ್‌ ಬಿಸ್ವಾಸ್‌ ನೆರವಿನಿಂದ ದೋಣಿಯಲ್ಲೇ ಪ್ರತ್ಯೇಕವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next