Advertisement

ಕೊಪ್ಪಳ: ಏತ ನೀರಾವರಿ ಯೋಜನೆಗೆ ಆಮೆ ವೇಗ

08:45 PM Oct 13, 2021 | Team Udayavani |

ವರದಿ: ದತ್ತು ಕಮ್ಮಾರ

Advertisement

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆ ಆರಂಭವಾಗಿ ದಶಕವೇ ಕಳೆದಿದೆ. ಬಲ ಭಾಗ ನೀರಾವರಿ ಸೌಲಭ್ಯ ಕಂಡಿದೆ. ಆದರೆ ಎಡ ಭಾಗದಲ್ಲಿ ನೀರಾವರಿ ಯೋಜನೆ ನಿಧಾನಗತಿಯಲ್ಲಿ ಸಾಗಿದೆ. ಎಡ ಭಾಗವನ್ನು ಹರಿ ನೀರಾವರಿ ಬದಲಿಗೆ, ಹನಿ ನೀರಾವರಿಯನ್ನಾಗಿ ಪರಿವರ್ತಿಸಿ ಹೆಕ್ಟೇರ್‌ ಪ್ರದೇಶ ವಿಸ್ತರಿಸಿದೆ. ಆದರೆ ಮುಂಡಗಿ-ಕೊಪ್ಪಳ-ಯಲಬುರ್ಗಾ ಭಾಗದಲ್ಲಿನ ಜನರು ಇಂದಿಗೂ ನೀರಾವರಿ ಕನಸು ಕಾಣುತ್ತಲೇ ಇದ್ದಾರೆ. ಅದು ಸಕಾರಗೊಂಡಿಲ್ಲ.

ಹೌದು. ಬರದ ನಾಡಿನ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಿ ಅವರ ಬದುಕು ಹಸನ ಮಾಡುವ ಉದ್ದೇಶದಿಂದ 1992ರಲ್ಲೇ ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಗೊಳಿಸಿದೆ. ಹೂವಿನಹಡಗಲಿ ಭಾಗದ ರೈತರು ನೀರಾವರಿ ಬಹುಪಾಲು ಪೂರ್ಣಗೊಂಡಿದೆ. ಆದರೆ ಎಡ ಭಾಗದಲ್ಲಿನ ಗದಗ-ಮುಂಡರಗಿ, ಕೊಪ್ಪಳ ಹಾಗೂ ಯಲಬುರ್ಗಾ ಭಾಗದಲ್ಲಿ ಬಹುಪಾಲು ನೀರಾವರಿ ಪ್ರದೇಶಕ್ಕೆ ನೀರು ಹರಿಯಬೇಕಿದ್ದರೂ ಇಲ್ಲಿವರೆಗೂ ರೈತರ ಜಮೀನಿಗೆ ನೀರೇ ಹರಿಯುತ್ತಿಲ್ಲ. ಇಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯತನವೂ? ಏನು ಎಂಬುದು ತಿಳಿಯದಂತಾಗಿದೆ. ಮುಂಡರಗಿ ಹಾಗೂ ಕೊಪ್ಪಳ ಭಾಗದ ರೈತ ಸಮೂಹಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಬಿಳಿ ಆನೆ ಎಂಬಂತೆ ಭಾಸವಾಗಿ ತೋರಿಕೆಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ.

ಹನಿ ನೀರಾವರಿಗೆ: ಕೆಲವು ವರ್ಷಗಳ ಹಿಂದೆ ಈ ಯೋಜನೆಯಡಿ ಎಡ ಭಾಗದ ಜಮೀನುಗಳಿಗೂ ಕಾಲುವೆ ಮೂಲಕ ಹರಿ ನೀರಾವರಿ ಯೋಜನೆ ರೂಪಿಸಲಾಗಿತ್ತು. ಆದರೆ ಯೋಜನೆ ಪ್ರದೇಶ ವಿಸ್ತರಿಸಲು ಹರಿ ನೀರಾವರಿಯಿಂದ ಹನಿ ನೀರಾವರಿಗೆ ಯೋಜನೆ ಪರಿವರ್ತನೆಗೊಳಿಸಿದ್ದಾರೆ. ಹೂವಿನಹಡಗಲಿಯ ಬಲ ಭಾಗ ಮಾತ್ರ ಹರಿ ನೀರಾವರಿಯಾಗಿದೆ. ಆದರೆ ಎಡ ಭಾಗದಲ್ಲಿನ ಗದ ಗ-ಮುಂಡರಗಿ-ಕೊಪ್ಪಳ-ಯಲಬುರ್ಗಾ ಭಾಗವು ಸಂಪೂರ್ಣ ಹನಿ ನೀರಾವರಿಗೆ ಪರಿವರ್ತಿಸಲಾಗಿದೆ. ಒಂದು ಹಂತದಲ್ಲಿ ಹನಿ ನೀರಾವರಿ ಯೋಜನೆ ಏಷ್ಟು ಯಶಸ್ವಿಯಾಗಿದೆ? ಎನ್ನುವ ಪ್ರಶ್ನೆ ರೈತ ಸಮೂಹದಲ್ಲೂ ಮೂಡಿದೆ. ಹೀಗಾದರೆ ರೈತರ ಜಮೀನಿಗೆ ನೀರು ಬರುವುದಾದರೂ ಹೇಗೆ ಎನ್ನುವ ಚರ್ಚೆ ಶುರುವಾಗಿದೆ.

ಹನಿ ನೀರಾವರಿ ಪ್ರದೇಶವೆಷ್ಟು?: ಸಿಂಗಟಾಲೂರು ಏತ ನೀರಾವರಿ ಅಡಿ ಗದಗ ತಾಲೂಕಿಗೆ 66,827 ಎಕರೆ, ಮುಂಡರಗಿ ತಾಲೂಕಿನಲ್ಲಿ 92,281 ಎಕರೆ, ಕೊಪ್ಪಳ ತಾಲೂಕಿನಲ್ಲಿ 55,706 ಎಕರೆ, ಯಲಬುರ್ಗಾ ತಾಲೂಕಿನಲ್ಲಿ 14,624 ಎಕರೆ ಪ್ರದೇಶವು ಸೇರಿ ಒಟ್ಟಾರೆ 4 ತಾಲೂಕು ಸೇರಿ ಒಟ್ಟಾರೆ 2,29,438 ಎಕರೆ ಪ್ರದೇಶ ಹನಿ ನೀರಾವರಿಗೆ ಒಳಪಡಲಿದೆ. ಇನ್ನೂ ಕೊಪ್ಪಳ-ಯಲಬುರ್ಗಾ ತಾಲೂಕಿನಲ್ಲಿಯೇ 70,330 ಎಕರೆ ಪ್ರದೇಶ ನೀರಾವರಿ ಸೌಲಭ್ಯ ಕಾಣಬೇಕಿದೆ. ಅದು ಹನಿ ನೀರಾವರಿ ಮೂಲಕವೇ ಎನ್ನುವುದು ಗಮನಾರ್ಹ ಸಂಗತಿ. 33 ಕಿ.ಮೀ.

Advertisement

ಕಾಲುವೆ ಮಾತ್ರ ನಿರ್ಮಾಣ: ಏತ ನೀರಾವರಿ ಯೋಜನೆಯಡಿ ಮುಂಡರಗಿ ತಾಲೂಕು ವ್ಯಾಪ್ತಿವರೆಗೂ 33 ಕಿ.ಮೀ. ಕಾಲುವೆಯ ಕಾಮಗಾರಿ ನಿರ್ಮಾಣಗೊಂಡಿದ್ದರೆ, ಅಲ್ಲಿಂದ ಕೊಪ್ಪಳ ತಾಲೂಕು ವ್ಯಾಪ್ತಿವರೆಗೂ 33 ಕಿಲೊ ಮೀಟರ್‌ ನಿಂದ 72 ಕಿಲೊ ಮೀಟರ್‌ ಕಾಲುವೆ ನಿರ್ಮಾಣ ಮಾಡಲಾಗಿದೆ. ಅಂದರೆ ಕೊಪ್ಪಳ ತಾಲೂಕಿನಲ್ಲಿ ಕೇವಲ 33 ಕಿ.ಮೀ. ಕಾಲುವೆ ನಿರ್ಮಾಣ ಮಾಡಲು ಒಂದು ದಶಕ ಕಾಲಹರಣ ಮಾಡಲಾಗಿದೆ. ಹನಿ ನೀರಾವರಿಯಾದರೂ ರೈತರ ಜಮೀನಿಗೆ ಬಂದೇ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಕಾಲಾವಧಿ ಯಲ್ಲಿ ಯೋಜನೆ ಪರಿಷ್ಕೃತಗೊಳಿಸಿ 5,768 ಕೋಟಿ ರೂ.ಗೆ ಅಂದಾಜು ಯೋಜನಾ ವರದಿ ಅನುಮೋದನೆಗೊಂಡಿದೆ. ಈ ಪೈಕಿ 2084 ಕೋಟಿ ವೆಚ್ಚಾಗಿದೆ. ಇತ್ತೀಚೆಗೆ ಮಾಹಿತಿ ಹಕ್ಕಿನಲ್ಲಿ ಲಭ್ಯವಾದ ಮಾಹಿತಿಯಂತೆ 3 ಸಾವಿರ ಕೋಟಿಯಷ್ಟು ಖರ್ಚಾಗಿದೆ. ಕೋಟಿ ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೂ ಎಡ ಭಾಗದ ರೈತರ ಜಮೀನಿಗೆ ಹನಿ ನೀರು ಬರದೇ ಇರುವುದು ದುರಂತವೇ ಸರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next