Advertisement

ಸಿಂಗಾಪುರ್‌ ಓಪನ್‌ : ಸಾಯಿಪ್ರಣೀತ್‌ ಸೇರಿ ಭಾರತದ ಪ್ರಮುಖ ಶಟ್ಲರ್ ಗಳು ಟೂರ್ನಿ ಯಿಂದ ದೂರ

11:23 PM May 11, 2021 | Team Udayavani |

ಹೊಸದಿಲ್ಲಿ: ಬಿ. ಸಾಯಿಪ್ರಣೀತ್‌ ಸಹಿತ ಭಾರತದ ಪ್ರಮುಖ ಶಟ್ಲರ್ ಮುಂಬರುವ “ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ’ಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲಿ ತೆರಳಿದ ಬಳಿಕ 21 ದಿನಗಳ ಕಠಿನ ಕ್ವಾರಂಟೈನ್‌ನಲ್ಲಿ ಇರಬೇಕಾದುದೇ ಇದಕ್ಕೆ ಕಾರಣ.

Advertisement

ವನಿತಾ ಡಬಲ್ಸ್‌ ಜೋಡಿಯಾಗಿರುವ ಅಶ್ವಿ‌ನಿ ಪೊನ್ನಪ್ಪ, ಎನ್‌. ಸಿಕ್ಕಿ ರೆಡ್ಡಿ ಕೂಡ ಸಿಂಗಾಪುರ ಟೂರ್ನಿಯಲ್ಲಿ ಆಡದಿರುವ ನಿರ್ಧಾರಕ್ಕೆ ಬಂದಿದ್ದಾರೆ.

ಮಲೇಶ್ಯ ಮತ್ತು ಸಿಂಗಾಪುರ್‌ ಓಪನ್‌ ಪಂದ್ಯಾವಳಿಗಾಗಿ ಸಾಯಿಪ್ರಣೀತ್‌ ಸತತ ಅಭ್ಯಾಸ ನಡೆಸುತ್ತಿದ್ದರು. ಆದರೆ ಮಲೇಶ್ಯ ಓಪನ್‌ ಮುಂದೂಡಲ್ಪಟ್ಟ ಕಾರಣ ಹಾಗೂ ಸಿಂಗಾಪುರ್‌ ಓಪನ್‌ನಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದುದರಿಂದ ಅಭ್ಯಾಸವನ್ನೂ ನಿಲ್ಲಿಸಿದ್ದಾರೆ.

ಇದನ್ನೂ ಓದಿ :ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next