Advertisement

ಸಿಂಧು, ಶ್ರೀಕಾಂತ್‌ ಜಯ: ಲಕ್ಷ್ಯ ಪರಾಭವ

12:24 AM Apr 27, 2023 | Team Udayavani |

ದುಬಾೖ: ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ನಲ್ಲಿ ಪಿ.ವಿ. ಸಿಂಧು, ಕೆ. ಶ್ರೀಕಾಂತ್‌ ಗೆಲುವಿನ ಓಟ ಆರಂಭಿಸಿ ಪ್ರಿ-ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ಲಕ್ಷ್ಯ ಸೇನ್‌ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.

Advertisement

ವನಿತಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಪಿ.ವಿ. ಸಿಂಧು ತೈಪೆಯ ವೆನ್‌ ಚಿ-ಸು ಅವರನ್ನು 46 ನಿಮಿಷ ಗಳ ಹೋರಾಟದ ಬಳಿಕ 21-15, 22-20 ಅಂತರದಿಂದ ಮಣಿಸು ವಲ್ಲಿ ಯಶಸ್ವಿಯಾದರು. ಸಿಂಧು ಅವರ ಮುಂದಿನ ಎದುರಾಳಿ ಚೀನದ ಹಾನ್‌ ಯೆ.

ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ ಬಹ್ರೈನ್‌ನ ಅದ್ನಾನ್‌ ಇಬ್ರಾಹಿಂ ಅವರನ್ನು ಕೇವಲ 25 ನಿಮಿಷ ಗಳಲ್ಲಿ 21-13, 21-8 ಅಂತರ ದಿಂದ ಹಿಮ್ಮೆಟ್ಟಿಸಿದರು.

ವನಿತಾ ಡಬಲ್ಸ್‌, ಮಿಶ್ರ ಡಬಲ್ಸ್‌
ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿ ಚಂದ್‌ ಸೇರಿಕೊಂಡು ಇಂಡೋನೇಷ್ಯಾದ ಲ್ಯಾನ್ನಿ ಟ್ರಿಯಾ ಮಾಯಾಸರಿ-ರಿಬ್ಕಾ ಸುಗಿಯಾರ್ಟೊ ಜೋಡಿಯನ್ನು 17-21, 21-17, 21-18ರಿಂದ ಪರಾಭವಗೊಳಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ರೋಹನ್‌ ಕಪೂರ್‌-ಸಿಕ್ಕಿ ರೆಡ್ಡಿ ಜಯ ಸಾಧಿಸಿದ್ದಾರೆ. ಇವರು ಮಲೇಷ್ಯಾದ ಚಾನ್‌ ಪೆಂಗ್‌ ಸೂನ್‌-ಚೆ ಯೀ ಸೀ ವಿರುದ್ಧ 21-12, 21-16ರಿಂದ ಗೆದ್ದರು.
ಕಾಮನ್ವೆಲ್ತ್‌ ಗೇಮ್ಸ್‌ ಬಂಗಾರ ಪದಕ ವಿಜೇತ ಲಕ್ಷ್ಯ ಸೇನ್‌ ಅವರನ್ನು ವಿಶ್ವದ 7ನೇ ನಂಬರ್‌ ಆಟಗಾರ ಸಿಂಗಾಪುರದ ಲೋಹ್‌ ಕೀನ್‌ ವ್ಯೂ 21-7, 23-21 ಅಂತರದಿಂದ ಪರಾಭವಗೊಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next