Advertisement

ಸಿಂಧನೂರು:ಭೀಕರ ರಸ್ತೆ ಅಪಘಾತ, 3 ಸಾವು,20 ಮಂದಿ ಗಂಭೀರ 

09:14 AM May 24, 2017 | |

ರಾಯಚೂರು : ಇಲ್ಲಿನ ಜವಳಗೇರಾ ಬಳಿ ಬುಧವಾರ ಬೆಳಗ್ಗೆ  ಟ್ರ್ಯಾಕ್ಟರ್‌ವೊಂದು ಕಾಲುವೆಗೆ ಪಲ್ಟಿಯಾದ ಪರಿಣಾಮ 3 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದು ,20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅವಘಡ ಸಂಭವಿಸಿದೆ. 

Advertisement

ಟ್ರ್ಯಾಕ್ಟರ್‌ನಲ್ಲಿ  ಒಂದೇ ಗ್ರಾಮದ  40 ಜನ ಕೂಲಿ ಕಾರ್ಮಿಕರನ್ನು ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ಕರೆದೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿತ್ತು.ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಬಗ್ಗೆ ತಿಳಿದು ಬಂದಿದೆ. 

ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆ, ಬಳ್ಳಾರಿ ಮತ್ತು ರಾಯಚೂರಿನ ವಿಮ್ಸ್‌ ಆಸ್ಪತ್ರೆ ಗಳಿಗೆ ದಾಖಲಿಸಲಾಗಿದೆ. ಆ ಪೈಕಿ 8 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ  ಪೊಲೀಸರು ತಿಳಿಸಿದ್ದಾರೆ. 

ಕಿರಿದಾದ ರಸ್ತೆಯಲ್ಲಿ ಟ್ರ್ಯಾಕ್ಟರ್‌ ಮಿತಿಗಿಂತ ಹೆಚ್ಚು ಜನರನ್ನು ತುಂಬಿ ಸಾಗಿಸುತ್ತಿದ್ದುದ್ದರಿಂದ ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದಿದೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next