Advertisement

Sindhanur: ಡಿಸಿಎಂಗೆ ಒಳಮೀಸಲಾತಿ ಜಾರಿ ಬಿಸಿ; ಹೆಲಿಪ್ಯಾಡ್ ಬಳಿಯೇ ಹೋರಾಟಗಾರರ ಘೇರಾವ್ ಯತ್ನ

04:14 PM Oct 08, 2024 | Team Udayavani |

ಸಿಂಧನೂರು: ಒಳಮೀಸಲಾತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಹೆಲಿಪ್ಯಾಡ್ ಬಳಿಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಹೋರಾಟಗಾರರು ಘೇರಾವು ಹಾಕಲು ಯತ್ನಿಸಿದ ಘಟನೆ ಮಂಗಳವಾರ (ಅ.08) ನಗರದಲ್ಲಿ ನಡೆಯಿತು.

Advertisement

ಒಂಬತ್ತು ದಿನಗಳ ಸಿಂಧನೂರು ದಸರಾ ಉತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಲು ನಗರಕ್ಕೆ ಆಗಮಿಸಿದ್ದರು.

ಹೆಲಿಕ್ಯಾಪ್ಟರ್ ನಿಂದ ಮುಂದಕ್ಕೆ ಬರುತ್ತಿದ್ದಂತೆ ಒಳಮೀಸಲಾತಿ ಜಾರಿ ಹೋರಾಟಗಾರರು ಸುತ್ತುವರಿದರು. ಜೊತೆಗೆ, ಈ ಬಗ್ಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸಿದರು. ಮಾಧ್ಯಮಗೋಷ್ಠಿಗೆ ಆಗಮಿಸುವ ವೇಳೆ ಭಾರಿ ನೂಕನುಗ್ಗಲು ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next