Advertisement

Mahanayaka ಧಾರಾವಾಹಿ ಕಲಾವಿದೆಗೆ ಸನ್ಮಾನಿಸಿದ್ದ ಬೆಳ್ಳಿ ಕಿರೀಟ ಕಳ್ಳತನ

09:18 PM Nov 30, 2023 | Team Udayavani |

ಚಾಮರಾಜನಗರ: ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚೆರಿತ್ರೆ ಆಧಾರಿತ ಮಹಾನಾಯಕ ಧಾರಾವಾಹಿ ಕಲಾವಿದರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ರಮಾಬಾಯಿ ಪಾತ್ರಧಾರಿ ನಟಿ ನಾರಾಯಣಿ ವರ್ಣೆ ಅವರಿಗೆ ತೊಡಿಸಿದ್ದ ಬೆಳ್ಳಿ ಕಿರೀಟ ಕಳ್ಳತನವಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ನಗರದ ಪೇಟೆ ಪ್ರೈಮರಿ ಶಾಲಾವರಣದಲ್ಲಿ ಸಂವಿಧಾನ ಬಳಗ ಸಂಘಟನೆಯಿಂದ ಬುಧವಾರ ಮಹಾನಾಯಕ ಧಾರಾವಾಹಿ ನಟರಾದ ಜಗನ್ನಾಥ್ ನಿವಗುಣೆ, ಅಥರ್ವ ಕರ್ವೆ ಅವರಿಗೆ ಬೆಳ್ಳಿ ಗದೆ ಹಾಗೂ ರಮಾಬಾಯಿ ಪಾತ್ರಧಾರಿ ನಾರಾಯಣಿ ವರ್ಣೆ ಅವರಿಗೆ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಲಾಗಿತ್ತು. ಸನ್ಮಾನದ ಬಳಿಕ ವೇದಿಕೆಯಲ್ಲಿ ಇಡಲಾಗಿದ್ದ 80 ಸಾವಿರ ರೂ. ಮೌಲ್ಯದ 600ಗ್ರಾಂ ಬೆಳ್ಳಿ ಕಿರೀಟ ಕಾಣೆಯಾಗಿದೆ.

ಸಮಾರಂಭದ ಬಳಿಕ ಕಾರ್ಯಕ್ರಮದ ಆಯೋಜಕರಾದ ವೆಂಕಟರಮಣಸ್ವಾಮಿ (ಪಾಪು) ಅವರಿಗೆ ವಿಷಯ ತಿಳಿದು ನಂತರ ಸಮಾರಂಭದ ಸ್ಥಳದಲ್ಲಿ ಹುಡುಕಾಡಿದರೂ ಕಿರೀಟ ಸಿಗದ ಕಾರಣ ಪಟ್ಟಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಲ್ಲದೇ ಯಾರಿಗಾದರೂ ಕಿರೀಟವು ಸಿಕ್ಕಿದ್ದರೆ ಅಥವಾ ಮಾಹಿತಿ ದೊರೆತರೆ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ವೆಂಕಟರಮಣಸ್ವಾಮಿ (ಪಾಪು) ಅವರ ಮೊಬೈಲ್ ನಂ: 9986216770 ತಿಳಿಸಿ ಸೂಕ್ತ ಬಹುಮಾನ ಪಡೆಯುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next