Advertisement

ಕಾಂಗ್ರೆಸ್‌ನಿಂದ ಸಜ್ಜನ್‌, ಟೈಟ್ಲರ್‌ ವಜಾಕ್ಕೆ ಸಿಕ್ಖರ ಆಗ್ರಹ; ಧರಣಿ

04:47 PM Apr 10, 2018 | Team Udayavani |

ಹೊಸದಿಲ್ಲಿ : 1984ರ ಸಿಕ್ಖ್ ವಿರೋಧಿ ದಂಗೆಯಲ್ಲಿ ಪಾತ್ರ ವಹಿಸಿದ್ದ ಸಜ್ಜನ್‌ ಕುಮಾರ್‌ ಮತ್ತು ಜಗದೀಶ್‌ ಟೈಟ್ಲರ್‌ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸಿಕ್ಖ ಸಮುದಾಯದ ಸದಸ್ಯರು ಇಂದು ಮಂಗಳವಾರ ಇಲ್ಲಿನ ಕಾಂಗ್ರೆಸ್‌ ಪ್ರಧಾನ ಕಾರ್ಯಾಲಯಕ್ಕೆ ಸಮೀಪ ಧರಣಿ ನಡೆಸಿದರು. 

Advertisement

ಪ್ರತಿಭಟನಕಾರರು ಎಐಸಿಸಿ ಪ್ರಧಾನ ಕಾರ್ಯಾಲಯವನ್ನು ತಲುಪದಂತೆ ಅರನ್ನು ಅಕ್‌ಬರ್‌ ರಸ್ತೆಯಲ್ಲೇ ಪೊಲೀಸರು ತಡೆದರು. 

ಪೊಲೀಸರು ತಡೆಯಲು ಪ್ರಯತ್ನಿಸಿದ ಹೊರತಾಗಿಯೂ ಪ್ರತಿಭಟನಕಾರರು ಪೊಲೀಸ್‌ ಬ್ಯಾರಿಕೇಡ್‌ಗಳನ್ನು ಏರಿ ಘೋಷಣೆಗಳನ್ನು ಕೂಗಿದರು. 

Advertisement

Udayavani is now on Telegram. Click here to join our channel and stay updated with the latest news.

Next