Advertisement

Sikh remarks; ರಾಹುಲ್‌ ಸಿಖ್‌ ಧಾರ್ಮಿಕ ಸ್ವಾತಂತ್ರ್ಯ ಮಾತಿಗೂ ಬಿಜೆಪಿ ನಾಯಕ ಆಕ್ರೋಶ

11:09 PM Sep 10, 2024 | Team Udayavani |

ವರ್ಜೀನಿಯಾ: ಭಾರತದಲ್ಲಿ ಸಿಖ್‌ ಸಮುದಾಯದವರಿಗೆ ಪೇಟ ಧರಿಸಲು, ಕಡಗ ಹಾಕಿಕೊಳ್ಳಲು ಅವಕಾಶ ಸಿಗುತ್ತಾ, ಗುರುದ್ವಾರಕ್ಕೆ ಹೋಗಲು ಬಿಡಲಾಗುತ್ತಾ ಎನ್ನುವುದರ ಕುರಿತಾಗಿದೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಆ ಕುರಿತು ನಮ್ಮ ಹೋರಾಟ. ಈ ವಿಚಾರ ಎಲ್ಲ ಧರ್ಮದವರಿಗೆ ಅನ್ವಯವಾಗುತ್ತದೆ ಎಂದು ವರ್ಜೀನಿಯಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್‌ ಹೇಳಿದ್ದಾರೆ.

Advertisement

ಅತಿ ಅಪಾಯಕಾರಿ ವಾದ-ಸಚಿವ ಹರ್ದೀಪ್‌: ರಾಹುಲ್‌ ಗಾಂಧಿ ಮಾತಿಗೆ ಬಿಜೆಪಿ ನಾಯಕರು ಕಠೊರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.   ಕೇಂದ್ರ ಸಚಿವ ಹರ್ದೀಪ್‌ ಪುರಿ ಪ್ರತಿಕ್ರಿಯಿಸಿ, ರಾಹುಲ್‌ ಅತಿ ಅಪಾಯಕಾರಿ ವಾದಗಳನ್ನು ಹರಿಬಿಡುತ್ತಿದ್ದಾರೆ. ಅವರೆದುರು ಕುಳಿತವರು ನನ್ನ ಸಮುದಾಯಕ್ಕೆ (ಸಿಖ್‌) ಸೇರಿದ್ದಾರೆ. ಅವರೆಲ್ಲ ಜೀವನೋಪಾಯಕ್ಕಾಗಿ ಅಮೆರಿಕದಲ್ಲಿದ್ದಾರೆ. ಅವರಿಗೆ ದೇಶದೊಂದಿಗೆ ಬಲವಾದ ಬಾಂಧವ್ಯವಿಲ್ಲ. ಅವರ ಎದುರು ರಾಹುಲ್‌ ಸುಳ್ಳು ವಾದಗಳನ್ನು ಇಟ್ಟಿದ್ದಾರೆ ಎಂದಿದ್ದಾರೆ. 1984ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಸಿಖ್‌ ವಿರೋಧಿ ದಂಗೆಯನ್ನು ಅವರು ಮರೆತಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next