Advertisement

Congress ಸಿದ್ದರಾಮಯ್ಯಗೆ ನಮ್ಮ ಕುಟುಂಬದ ಮೇಲೆ ಅಸೂಯೆ: ಎಚ್‌.ಡಿ.ದೇವೇಗೌಡ

11:35 PM Mar 06, 2024 | Team Udayavani |

ಹಾಸನ: ನಾವು ಯಾವ ಸಮುದಾಯಕ್ಕೂ ಆನ್ಯಾಯ ಮಾಡಿಲ್ಲ. ಆದರೂ ಸಿದ್ದರಾಮಯ್ಯಗೆ ನಮ್ಮ ಕುಟುಂಬದ ಮೇಲೆ ಅಸೂಯೆಯಿದೆ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆರೋಪಿಸಿದರು.

Advertisement

ನಗರದಲ್ಲಿ ಬುಧವಾರ ಸಂಜೆ ಜರಗಿದ ಪಕ್ಷದ ಕಾರ್ಯಕ್ರಮದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ 5 ವರ್ಷಗಳ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇವೇಗೌಡರ ಕುಟುಂಬದವರು ಪ್ರಧಾನಿಯಾದರು, ಮಗ ಮುಖ್ಯಮಂತ್ರಿ, ಮತ್ತೂಬ್ಬ ಮಗ ಮಂತ್ರಿ, ಮೊಮ್ಮಗ ಸಂಸದನಾದ ಎಂಬ ಅಸೂಯೆ ಸಿದ್ದರಾಮಯ್ಯ ಅವರಿಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಜೆಡಿಎಸ್‌ – ಕಾಂಗ್ರೆಸ್‌ ಸರಕಾರದಲ್ಲಿ ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಸಿದ್ದರಾಮಯ್ಯ ಜಾರಿಗೊಳಿಸಿದ್ದ ಭಾಗ್ಯಗಳನ್ನೂ ಮುಂದುವರಿಸಿದರು. ಆದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಯಾವ ಪುರುಷಾರ್ಥಕ್ಕೆ? ಅರಸೀಕೆರೆ ಮತ್ತು ಹಾಸನಕ್ಕೆ ಬಂದು ನಮ್ಮ ಅಧಿಕಾರವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಧಿಮಾಕು ತೋರುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next