Advertisement

28 ರ ಹರೆಯದ ಹಿಮಾಚಲ ಕ್ರಿಕೆಟಿಗ ಸಿದ್ಧಾರ್ಥ್ ಶರ್ಮ ನಿಧನ

11:05 PM Jan 13, 2023 | Team Udayavani |

ಹೊಸದಿಲ್ಲಿ: ಅನಾರೋಗ್ಯದಿಂದ ವಡೋದರ ಆಸ್ಪತ್ರೆಗೆ ದಾಖಲಾಗಿದ್ದ ಹಿಮಾಚಲ ಪ್ರದೇಶದ ಕ್ರಿಕೆಟಿಗ ಸಿದ್ಧಾರ್ಥ್ ಶರ್ಮ (28) ಚಿಕಿತ್ಸೆ ಫ‌ಲಕಾರಿಯಾಗದೆ ಶುಕ್ರವಾರ ನಿಧನ ಹೊಂದಿದರು.

Advertisement

ಪೇಸ್‌ ಬೌಲರ್‌ ಆಗಿದ್ದ ಸಿದ್ಧಾರ್ಥ್ ಶರ್ಮ 2021-22ನೇ ಋತುವಿನ “ವಿಜಯ್‌ ಹಜಾರೆ ಟ್ರೋಫಿ’ ವಿಜೇತ ಹಿಮಾಚಲ ತಂಡದ ಸದಸ್ಯರಾಗಿದ್ದರು. 6 ಪ್ರಥಮ ದರ್ಜೆ ಪಂದ್ಯ, 6 ಲಿಸ್ಟ್‌ ಎ ಪಂದ್ಯ ಹಾಗೂ ಒಂದು ಟಿ20 ಪಂದ್ಯಗಳನ್ನಾಡಿ 33 ವಿಕೆಟ್‌ ಕೆಡವಿದ್ದರು.

ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸುಖು ಅವರು ರಾಜ್ಯದ  ಕ್ರಿಕೆಟ್ ತಂಡದ ಸದಸ್ಯರಾಗಿದ್ದ ವೇಗದ ಬೌಲರ್ ಸಿದ್ಧಾರ್ಥ್ ಶರ್ಮಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ,ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

28 ವರ್ಷದ ಸೀಮರ್‌ನ ಹಠಾತ್ ನಿಧನದಿಂದ ಕ್ರಿಕೆಟ್ ಬಂಧುಗಳು ಆಘಾತಕ್ಕೊಳಗಾಗಿದ್ದಾರೆ. ಅವರು ಹಿಮಾಚಲ ಪ್ರದೇಶ ತಂಡದ ಭಾಗವಾಗಿದ್ದರು ಮತ್ತು ನಿಗದಿತ ರಣಜಿ ಟ್ರೋಫಿ ಪಂದ್ಯಕ್ಕಾಗಿ ಸಹ ಆಟಗಾರರೊಂದಿಗೆ ಗುಜರಾತ್‌ಗೆ ತೆರಳಿದ್ದರು. ಆದರೆ, ಅನಾರೋಗ್ಯದ ಕಾರಣ ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿತು ಆದರೆ ಚಿಕಿತ್ಸೆ ಸಮಯದಲ್ಲಿ ಅವರು ನಿಧನ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next