Advertisement

ಮುಖ್ಯಮಂತ್ರಿ ಆಗುತ್ತೇನೆ ಎಂದಿಲ್ಲ, ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಬಂದರೆ ಸರಕಾರ ರಚನೆ

10:49 AM Dec 13, 2019 | keerthan |

ಹುಬ್ಬಳ್ಳಿ: ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ. ಉಪ ಚುನಾವಣೆ ನಂತರ ಹೆಚ್ಚು ಸ್ಥಾನ ಬಂದರೆ ಸರಕಾರ ರಚಿಸುತ್ತೇವೆ ಎಂದು ಹೇಳಿದ್ದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಉಪ ಚುನಾವಣೆಯಲ್ಲಿ, ಜನ ಯಾವ ತೀರ್ಪು ನೀಡಲಿದ್ದಾರೆ ನೋಡೋಣ ಎಂದರು. ಸಿದ್ಧರಾಮಯ್ಯಗೆ ಸಿಎಂ ಆಗುವ ಹುಚ್ಚು ಹಿಡಿದಿದೆ ಎಂಬ ಸಚಿವ  ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಬಿಜೆಪಿಯವರು ಬಾಯಿಗೆ ಬಂದಂಗೆ ಮಾತನಾಡುತ್ತಾರೆ, ಅವರು ಹಿಂಬಾಗಿಲಿನಿಂದ ಅಧಿಕಾರದ ಗದ್ದುಗೆ ಏರಿದವರು ಎಂದು ವಾಗ್ದಾಳಿ ನಡೆಸಿದರು.

ಸದ್ಯಕ್ಕೆ ಜೆಡಿಎಸ್ ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next