Advertisement

ಸಿದ್ದರಾಮಯ್ಯಗೆ ಹಿಂದು ಎನ್ನುವುದು ಗೊತ್ತಾಗಿದೆ:ಯೋಗಿ 

02:17 PM Jan 07, 2018 | |

ಬೆಂಗಳೂರು: ‘ನಿಮ್ಮ ಒಗ್ಗಟ್ಟು ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿ ಹೇಗೆ ದೇಗುಲಗಳ ದರ್ಶನ ಮಾಡಿಸಿತೋ ಹಾಗೆಯೇ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದು ಎನ್ನುವುದನ್ನು ಗೊತ್ತಾಗಿಸಿದೆ’ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಟಾಂಗ್‌ ನೀಡಿದರು. 

Advertisement

ವಿಜಯನಗರದ ಎಂ.ಸಿ.ಬಡಾವಣೆಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ನಡೆದ  ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಿದ ಅವರು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. 

‘ನಾನು ನಿನ್ನೆಯೆ ಇಲ್ಲಿಗೆ ಬಂದಿದ್ದೆ ಪತ್ರಿಕೆಯೊಂದರಲ್ಲಿ ನೋಡಿದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಾನು ಹಿಂದು ಎಂದು ಹೇಳಿಕೊಂಡಿರುವುದು. ನಿಮ್ಮ ಒಗ್ಗಟ್ಟು ಎನ್ನುವುದು ಅವರಿಂದ ಈ ಹೇಳಿಕೆ ಹೊರ ಬರುವಂತೆ ಮಾಡಿದೆ’ ಎಂದರು. 

‘ಹಿಂದುತ್ವ ಭಾರತದ ಜೀವನ ಪದ್ಧತಿ. ಇದು ಜಾತಿ ಮತ ಅಲ್ಲ, ಭಾರತದ ಅನುಸಾರ ಜೀವನ ಮಾಡುವ ವಿಶ್ವದ ಉತ್ಕೃಷ್ಟ ಜೀವನ ಪದ್ಧತಿ . ಹಿಂದು ಧರ್ಮದಲ್ಲಿ  ಗೋಮಾಂಸ ತಿನ್ನುವುದನ್ನು ಒಪ್ಪುವುದಿಲ್ಲ. ನೀವು ಗೋಮಾಂಸ ತಿನ್ನುವುದನ್ನು ನಾವು  ಒಪ್ಪುತ್ತೇವಾ’ ಎಂದು ಪ್ರಶ್ನಿಸಿದರು. 

‘ಬಿಜೆಪಿ ಅಧಿಕಾರದಲ್ಲಿದ ವೇಳೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಿದ್ದೇವು.ಆದರೆ ಕಾಂಗ್ರೆಸ್‌ ಅದನ್ನು ತೆಗೆದುಹಾಕಿತು. ತುಷ್ಟೀಕರಣ ನೀತಿಯನ್ನು ಕಾಂಗ್ರೆಸ್‌ ಅನುಸರಿಸುತ್ತಿದೆ’ ಎಂದು ಕಿಡಿ ಕಾರಿದರು. 

Advertisement

‘ಮುಂದಿನ ದಿನಗಳಲ್ಲಿ ಕರ್ನಾಟಕದ ಅಭಿವೃದ್ದಿಗೆ ಬಿಜೆಪಿಗೆ ಮತ ನೀಡಿ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾಡುತ್ತಿರುವ ಸಮಗೃ ಭಾರತದ ಅಭಿವೃದ್ಧಿಗೆ ಕೈಜೋಡಿಸಿ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next