Advertisement

ಒಂಟಿ ಸಲಗ ಯಾವತ್ತಿಗೂ ಡೇಂಜರ್‌!; ಸಿದ್ದರಾಮಯ್ಯ ಟಾಂಗ್‌

09:57 AM Jun 07, 2019 | Vishnu Das |

ಬೆಂಗಳೂರು: ಆನೆಗಳು ಗುಂಪಿನಲ್ಲಿ ಇದ್ದರೆ ಅಪಾಯ ವಿಲ್ಲ, ಆದರೆ ಒಂಟಿ ಸಲಗ ಯಾವತ್ತಿಗೂ ಡೇಜಂರ್‌.ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ ಪರಿ.

Advertisement

ಬೆಂಗಳೂರಿನ ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ಗುರುವಾರ ದುನಿಯಾ ವಿಜಯ್‌ ಅವರು ಅಭಿನಯಿಸುತ್ತಿರುವ ಸಲಗ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆನೆ ನಡೆದಿದ್ದೇ ದಾರಿ ಎನ್ನುತ್ತಾರೆ, ಯಾವತ್ತೂ ಆನೆಗಳು ಒಟ್ಟಾಗಿದ್ದರೆ ನಮಗೆ ಅಪಾಯ ಉಂಟು ಮಾಡುವುದಿಲ್ಲ.ಆದರೆ ಒಂಟಿಯಾಗಿರುವ ಸಲಗಕ್ಕೆ ಭಯ ಜಾಸ್ತಿ, ಅದೆಕ್ಕೇನಾದರೂ ಅಪಾಯವಾಗುತ್ತದೆ ಎಂದು ನಮ್ಮ ಮೇಲೆ ದಾಳಿ ನಡೆಸಲು ಮುಂದಾಗುತ್ತದೆ ಎಂದರು.

ಇದೇ ವೇಳೆ ದುನಿಯಾ ವಿಜಯ್‌ ಅವರು ಒಳ್ಳೆಯ ನಟ, ಚಿತ್ರದ ಕಥೆ ನನಗೆ ಗೊತ್ತಿಲ್ಲ, ತೆರೆಯ ಮೇಲೆ ನೋಡುತ್ತೇನೆ ಎಂದರು.

ಪರೋಕ್ಷ ಟಾಂಗ್‌?
ಸಿದ್ದರಾಮಯ್ಯ ವಿರುದ್ದ ಕಾಂಗ್ರೆಸ್‌ನ ಹಿರಿಯ ನಾಯಕರು ಬಹಿರಂಗ ಅಸಮಾಧಾನ ಹೊರ ಹಾಕಿ ತೀವ್ರ ಟೀಕೆಗಳನ್ನು ಮಾಡಿದ್ದರು. ಶಾಸಕರಾದ ರೋಷನ್‌ ಬೇಗ್‌, ರಾಮಲಿಂಗಾ ರೆಡ್ಡಿ ಅವರು ಅಸಮಾಧಾನವನ್ನುಹೊರ ಹಾಕಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next