Advertisement

ಸಿ.ಟಿ ರವಿ ಅವರ ಅಭಿವೃದ್ಧಿಯಾಗಿದೆ ಹೊರತು ಜನರ ಅಭಿವೃದ್ಧಿಯಾಗಿಲ್ಲ: ಸಿದ್ದರಾಮಯ್ಯ

09:33 AM Feb 01, 2020 | keerthan |

ಚಿಕ್ಕಮಗಳೂರು: ರಾಜ್ಯಪಾಲರ ಭಾಷಣದಲ್ಲಿ ಆಕ್ಷೇಪಾರ್ಹ ವಿಷಯಗಳಿದ್ದರೆ ನಂತರದ ಮಾತು. ಪ್ರತಿಭಟಿಸುವ ಶಾಸಕರನ್ನು ಅಮಾನತಿನಲ್ಲಿ ಇಡುತ್ತೇವೆ ಎನ್ನುವುದು ಅಸಾಂವಿಧಾನಿಕ. ರಾಜ್ಯಪಾಲರ ಭಾಷಣದ ಪ್ರತಿ ನೋಡಿದ ಮೇಲೆ ನಾವು ನಮ್ಮ ಅಭಿಪ್ರಾಯ ತಿಳಿಸಲೇ ಬೇಕಾಗುತ್ತದೆ. ಶಾಸಕರ ಹಕ್ಕನ್ನು ನಾವು ರಾಜ್ಯದ ಜನತೆಯ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ. ವಿನಾ ಕಾರಣ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ ಆಕ್ಷೇಪಾರ್ಹವಿದ್ದರೆ ಪ್ರತಿಭಟಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಖಾಸಗಿ ಹೋಟೇಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಭಿವೃದ್ದಿ ವಿಚಾರ ಸಿಟಿ ರವಿ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯರವರು ಸಿ ಟಿ ರವಿ ಯಾವತ್ತು ಸತ್ಯ ಹೇಳಿ ಗೊತ್ತಿಲ್ಲ. ಸುಳ್ಳು ಮೈಗೂಡಿಸಿಕೊಂಡಿದ್ದಾರೆ. ಹಳ್ಳಿಗಳಿಗೆ ಹೋಗಿ ಜನರನ್ನ ಕೇಳೋಣ ಜನರ ಏನು ಹೇಳ್ತಾರೆ ಅಂತಾ ತೀರ್ಮಾನ ಆ ನಂತರ ತೀರ್ಮಾನ ಮಾಡೋಣ ಎಂದರು. ಸಿ.ಟಿ ರವಿ ಅವರ ಅಭಿವೃದ್ಧಿಯಾಗಿದೆ ಹೊರತು ಜನರ ಅಭಿವೃದ್ಧಿಯಾಗಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕಳೆದ ಬಾರಿ ಬಜೆಟ್ ನಲ್ಲಿ 27 ಲಕ್ಷ ಕೋಟಿ ಖರ್ಚು ಮಾಡುತ್ತೇನೆ ಎಂದ್ದಿದ್ದ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಗೊತ್ತಾಗುತ್ತದೆ‌‌‌. ಸ್ವರ್ಗ ಸೃಷ್ಟಿ ಮಾಡ್ತೇನೆ ಅಂದಿದ್ದರು. ಅದರೆ ಈಗ ನರಕವಾಗಿದೆ. ಜಿಡಿಪಿ ಅವರ ಪ್ರಕಾರ 4.5% ನನ್ನ ಪ್ರಕಾರ 2.5%. ಜಿಡಿಪಿ ಇಳಿದಿದೆ ಎಂದರು.

10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದಿದ್ದರು ಈಗ ಲಕ್ಷಾಂತರ ಉದ್ಯೋಗ ಕಡಿತವಾಗಿದೆ. ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದನ್ನು ಮುಚ್ಚಿ ಹಾಕಲು ಸಿಎಎ, ಎನ್ ಅರ್ ಸಿ ಮೂಲಕ ಬೇರೆ ಕಡೆ ಸೆಳೆಯಲು ನಾಟಕ ಮಾಡುತ್ತಿದ್ದಾರೆ ಎಂದರು.

ದೆಹಲಿಯಲ್ಲಿ  ನಿನ್ನೆ ಗುಂಡು ಹಾರಿಸಿದ ಪ್ರಕರಣ ಕುರಿತು ಮಾತನಾಡಿದ ಅವರು, ಮಹಾತ್ಮ ಗಾಂಧಿಯನ್ನು ಕೊಂದಿದ್ದು ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾದವರು. ಗಾಂಧೀಜಿ ಹಿಂದೂ ವಿರೋಧಿಯಾಗಿರಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕುಮಕ್ಕಿನಿಂದ ನಿನ್ನೆ ಗುಂಡು ಹಾರಿಸಿರುವುದು. ಪೊಲೀಸರು ಮೂಖಪ್ರೇಕ್ಷಕರಂತೆ ನೋಡುತ್ತಿದ್ದರು ಎಂದರೆ ದೇಶದ ಪರಿಸ್ಥಿ ಏನಾಗಿದೆ ಎಂಬುದು ತಿಳಿಯುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next