Advertisement

ಸಿದ್ದರಾಮಯ್ಯರಿಂದ ವಿಶೇಷ ಪೂಜೆ

11:52 AM Feb 25, 2017 | Team Udayavani |

ಚಾಮರಾಜಪೇಟೆಯ ಶ್ರೀ ಮಲೆಮಹದೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ವಿಶೇಷ ಪೂಜೆ. ಸಿಎಂ ಸಿದ್ದರಾಮಯ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಸಂಜೆ ನಾದಸ್ವರ ಕಾರ್ಯಕ್ರಮ. ಜಾಗರಣೆ ಪ್ರಯುಕ್ತ ರಾತ್ರಿ ಕೆ. ಗುರುರಾಜ್‌ ಮತ್ತು ಸಂಗಡಿಗರಿಂದ ಕಥಾಕಲಾಕ್ಷೇಪ ನಡೆದವು. 

Advertisement

ಶ್ರೀಧರ ಶ್ರೀಗುಡ್ಡ ವ್ಯಾಸವೇದ ಪೀಠದಿಂದ ಶಿವರಾತ್ರಿ ಅಂಗವಾಗಿ ಬೆಳಗ್ಗೆ ಸಹಸ್ರ ರುದ್ರಾಕ್ಷ ಲಿಂಗಕ್ಕೆ ಅಭಿಷೇಕ, ಅರ್ಚನೆ, ಆರತಿ. ಸ್ವ-ಹಸ್ತದಿಂದ ಸಹಸ್ರ ರುದ್ರಾಕ್ಷ ಲಿಂಗಕ್ಕೆ ಪನ್ನೀರಿನ ಅಭಿಷೇಕ, ಸಂಜೆ “ತ್ರಿಕೂಟ ದರ್ಶನ’ ಮಹಾನ್ಯಾಸ ಸಮೇತ ಸ್ಪಟಿಕ ಲಿಂಗಕ್ಕೆ ರುದ್ರಾಭಿಷೇಕ ಏರ್ಪಡಿಸಲಾಗಿತ್ತು. 

ವಿಜಯನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ವತಿಯಿಂದ ಶಿವರಾತ್ರಿ ಅಂಗವಾಗಿ ಬೆಳಗ್ಗೆ ವಿಶೇಷ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ. ಮಧ್ಯಾಹ್ನ ಭಕ್ತಿ ಗೀತೆಗಳ ಗಾಯನ, ಭಜನೆ, ಸಂಜೆ ಗಿರಿಜಾ ಕಲ್ಯಾಣ ನಾಟಕ ಪ್ರದರ್ಶನ, ಭರತನಾಟ್ಯ, ನಲ್ಲತಂಗ ನಾಟಕ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next