Advertisement

ಪಕ್ಷಾಂತರ ಪಕ್ಕಾ?:ಶಾಸಕರು ಸಂಪರ್ಕದಲ್ಲಿರುವುದು ಸತ್ಯ ಎಂದ ಸಿದ್ದರಾಮಯ್ಯ

12:32 PM Jan 25, 2022 | Team Udayavani |

ಬೆಂಗಳೂರು : ಬಿಜೆಪಿ ಹಾಗೂ ಜೆಡಿ ಎಸ್ ಶಾಸಕರು ತಮ್ಮ‌ಜತೆ ಸಂಪರ್ಕದಲ್ಲಿರುವುದು ಸತ್ಯ. ಆದರೆ ಅವರ ಹೆಸರನ್ನು ಬಹಿರಂಗಗೊಳಿಸಲು ಸಾಧ್ಯವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

Advertisement

ಬಿಜೆಪಿಯ ಕೆಲ ಸಚಿವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜತೆಗೆ ಸಂಪರ್ಕ ದಲ್ಲಿದ್ದಾರೆ. ಸೀಟ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಮಾತಿಗೆ ಈಗ ಮಹತ್ವ ಲಭಿಸಿದೆ.

ಷರತ್ತುಗಳಿಲ್ಲದೆ ಪಕ್ಷಕ್ಕೆ ಬರಬೇಕು. ನಮಗೆ ಸಿದ್ಧಾಂತ ಒಪ್ಪುವವರು ಬೇಕು. ಸಿದ್ಧಾಂತ, ನಾಯಕತ್ವ ಒಪ್ಪಿ ಬಂದರೆ ಸ್ವಾಗತ ಎಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ತೀವ್ರವಾದ ಉಸ್ತುವಾರಿ ವಿವಾದ: ‘ಪಕ್ಷದ ರಾಜಕೀಯ ನೀತಿ’ ಎಂದ ಸಿಎಂ ಬೊಮ್ಮಾಯಿ

ಎರಡು ಪಕ್ಷದ ಮುಖಂಡರು ನಮ್ಮ‌ಜತೆ ಸಂಪರ್ಕದಲ್ಲಿರುವುದು ಸತ್ಯ. ಆದರೆ ಅವರುಗಳ‌‌‌ ಹೆಸರನ್ನು ಈ‌ ಹಂತದಲ್ಲಿ ಬಹಿರಂಗಗೊಳಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement

ಸಂಪುಟ ವಿಸ್ತರಣೆ ಸಂಬಂಧ ಹೇಳಿಕೆ ನೀಡಿದ್ದ ಯತ್ನಾಳ್, ಉತ್ತರ ಪ್ರದೇಶದ ರೀತಿಯಲ್ಲಿ ವಲಸಿಗರು ಅಧಿಕಾರಕ್ಕಾಗಿ ಬಿಜೆಪಿಗೆ ಬಂದಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜೀನಾಮೆ ಕೊಟ್ಟು ಹೋಗುತ್ತಾರೆ. ಹೀಗಾಗಿ ಈಗಲೇ ಬದಲಾವಣೆ ಮಾಡುವಂತೆ ಆಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next