Advertisement

ಸಿದ್ದರಾಮಯ್ಯ ತಾಲಿಬಾನ್ ಸಂಸ್ಕ್ರತಿ ನಾಯಕ: ರವಿಕುಮಾರ್

04:06 PM Sep 28, 2021 | Team Udayavani |

ಬೆಂಗಳೂರು: ಸಿದ್ದರಾಮಯ್ಯ ತಾಲಿಬಾನ್ ಸಂಸ್ಕ್ರತಿ ನಾಯಕ. ಅವರ ಅಧಿಕಾರಾವಧಿಯಲ್ಲಿ 18 ಹಿಂದೂ ಕಾರ್ಯಕರ್ತರ ಕೊಲೆಯಾಗಿತ್ತು. ಅನೇಕ ಹಿಂದೂಗಳನ್ನು ಕೊಲೆ ಮಾಡಿದ್ದ ಟಿಪ್ಪು ಜಯಂತಿ ಆಚರಣೆ ಮಾಡಿದರು. ಇದು ತಾಲಿಬಾನ್ ನ ನಿಜವಾದ ಮನಸ್ಥಿತಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಎನ್ ಯು ನಲ್ಲಿ ರಾಷ್ಟ್ರೀಯ ಧ್ವಜ ಸುಟ್ಟು ಹಾಕಿದ ತುಕುಡೆ ಗ್ಯಾಂಗ್ ಗೆ ಕಾಂಗ್ರೆಸ್ ಸಪೋರ್ಟ್ ಮಾಡಿತ್ತು. ಹೀಗಾಗಿ ಕಾಂಗ್ರೆಸ್ ನದ್ದು ತಾಲಿಬಾನ್ ಸಂಸ್ಕ್ರತಿ. ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಮತ್ತೆ ಪುನಃ ಸ್ಥಾಪನೆ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ನದ್ದು ತಾಲಿಬಾನ್ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.

ತ್ರಿವಳಿ ತಲಾಕ್ ನಿಷೇಧಕ್ಕೆ ಸಿದ್ದರಾಮಯ್ಯ ವಿರೋಧ ಮಾಡಿದ್ದರು. ಇದು ತಾಲಿಬಾನ್ ಸಂಸ್ಕ್ರತಿ, ತಾಲಿಬಾನ್ ಕೂಡ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿಲ್ಲ. ಹೀಗಾಗಿ ಸಿದ್ದರಾಮಯ್ಯ ನಿಜವಾಗಿ ತಾಲಿಬಾನ್ ನಾಯಕ ಎಂದು ರವಿ ಕುಮಾರ್ ಕಿಡಿಕಾರಿದರು.

ಬಿಜೆಪಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಸರಿ. ಆದರೆ ತುರ್ತು ಪರಿಸ್ಥಿತಿ ಸಮಯದಲ್ಲಿ ಸಿದ್ದರಾಮಯ್ಯ ಹೋರಾಟ ಮಾಡಿದ್ದರೇ? ಸಿದ್ದರಾಮಯ್ಯ ಹುಡುಗಾಟದ ಮಾತು ಆಡುತ್ತಿದ್ದಾರೆ. ಆರ್ ಎಸ್ಎಸ್ ನ್ನು ಜಗತ್ತೇ ಒಪ್ಪಿದೆ. ಸಿದ್ದರಾಮಯ್ಯರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು. ಸಿದ್ದರಾಮಯ್ಯ ತಾಲಿಬಾನ್ ಹೇಳಿಕೆ ವಾಪಸ್ ಪಡೆಯಬೇಕು ಇಲ್ಲವಾದರೆ ಸಿದ್ದರಾಮಯ್ಯರನ್ನೇ ಜನ ನಿಷೇದ ಮಾಡ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next