Advertisement

ಸಿದ್ದು ಕೆಳಗೆ ಬಿದ್ದಿದ್ದಾರೆಂದು ಕಲ್ಲು ಹೊಡೆಯಲ್ಲ: ಈಶ್ವರಪ್ಪ

11:10 PM Sep 28, 2019 | Lakshmi GovindaRaju |

ಶಿವಮೊಗ್ಗ: ಯಾವುದೇ ವ್ಯಕ್ತಿ ಹಾಗೂ ಸ್ಥಾನಮಾನ ಯಾವುದೂ ಶಾಶ್ವತವಲ್ಲ. ನಾನೂ ಸೇರಿ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಯಾರೇ ಆಗಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸದ್ಯಕ್ಕೆ ಸಿದ್ದರಾಮಯ್ಯ ಕೆಳಗೆ ಬಿದ್ದಿದ್ದಾರೆ ಎಂದು ನಾನು ಒಂದು ಕಲ್ಲು ಹೊಡೆಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಿದ್ದಾಗ, ಸ್ಥಾನಮಾನ ಸಿಕ್ಕಾಗ ಪಕ್ಷದೊಂದಿಗೆ ಹೇಗೆ ನಡೆದುಕೊಂಡಿದ್ದೇವೆ. ಸಂಬಂಧ ಹೇಗಿತ್ತು ಎಂಬುದು ಇಂತಹ ಘಟನೆಗಳಿಂದ ಗೊತ್ತಾಗುತ್ತದೆ. ಅಧಿಕಾರವಿದ್ದಾಗ ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಯಿಂದ ಅಧಿಕಾರ ನಡೆಸಿದರು. ಕುತಂತ್ರ ರಾಜಕಾರಣವೇ ಕಾಂಗ್ರೆಸ್‌ ನಿರ್ನಾಮಕ್ಕೆ ಕಾರಣವಾಗಿದೆ. ಇದರಿಂದ ಸರ್ಕಾರವೇ ಬಿಧ್ದೋಯ್ತು. ಅವರೂ ಸೋತರು.

ಇದು ಎಲ್ಲರಿಗೂ ಒಂದು ಪಾಠ. ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ಅಲ್ಲ ಎಂದರು. ಯಾವುದೇ ವ್ಯಕ್ತಿ ಪಕ್ಷದ ಬೆಂಬಲವಿಲ್ಲದೇ ಅ ಧಿಕಾರಕ್ಕೆ ಏರಲು ಅಸಾಧ್ಯ. ಸಿದ್ದರಾಮಯ್ಯ ಕೂಡ ಪಕ್ಷ ಕಟ್ಟಿ ಮೂರು ಮತ್ತೂಂದು ಸೀಟು ಪಡೆದರು. ಯಡಿಯೂರಪ್ಪನವರು ಸಹ ಪಕ್ಷ ಕಟ್ಟಿ ಮೂರು ಮತ್ತೂಂದು ಸೀಟು ಪಡೆದರು. ಸಂಘಟನೆ ಮೀರಿ ಯಾವುದೇ ವ್ಯಕ್ತಿ ಉದ್ಧಾರ ಆಗಲು ಸಾಧ್ಯವಿಲ್ಲ. ಹಾಗೇ ಹೋದರೇ ಅವರೇ ನಾಶವಾಗ್ತಾರೆ ಎಂದು ಪರೋಕ್ಷವಾಗಿ ಕುಟುಕಿದರು.

ಹೆಚ್ಚುವರಿ ಖಾತೆ – ಸಿಎಂ ಜತೆ ಚರ್ಚಿಸಿ ತೀರ್ಮಾನ: ಯುವಜನ ಹಾಗೂ ಕ್ರೀಡಾ ಇಲಾಖೆ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಸಿಎಂ ಯಡಿಯೂರಪ್ಪ ಜತೆ ಚರ್ಚಿಸಿದ ಬಳಿಕವೇ ನಿರ್ಧರಿಸುವುದಾಗಿ ಈಶ್ವರಪ್ಪ ಹೇಳಿದರು. ಸಿಎಂ ಶುಕ್ರವಾರ ಹೆಚ್ಚುವರಿ ಖಾತೆ ಹಂಚಿಕೆ ಮಾಡಿದ್ದಾರೆ. ಅವರ ಬಳಿ ಚರ್ಚಿಸಿ, ಜವಾಬ್ದಾರಿ ವಹಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next