Advertisement

ಸಿದ್ದರಾಮಯ್ಯ ಮೂರ್ಖ,ಹಗಲು ದರೋಡೆ ಮಾಡಿದ ಲೂಟಿಕೋರ: ಬಿಎಸ್‌ವೈ

10:18 AM Apr 27, 2018 | Team Udayavani |

ಬೆಂಗಳೂರು: ರಾಜ್ಯದ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ಕುಂತಲ್ಲಿ ನಿಂತಲ್ಲಿ ಶಾಪ ಹಾಕುತ್ತಿದ್ದಾರೆಎಂದು ಬಿಜೆಪಿ  ಸಿಎಂ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಕಿಡಿ ಕಾರಿದ್ದಾರೆ. 

Advertisement

ಚಾಲುಕ್ಯ ಸರ್ಕಲ್‌ನಲ್ಲಿರುವ ಅಮಿತ್‌ ಶಾ ಅವರ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು. 

‘ಸಿದ್ದರಾಮಯ್ಯ ಮೂರ್ಖ, ಹಗಲು ದರೋಡೆ ಮಾಡಿದ ಲೂಟಿಕೋರ, ಭ್ರಷ್ಟ. ಎಸಿಬಿ ಮೂಲಕ ಎಲ್ಲಾ ಭ್ರಷ್ಟರಿಗೆ ಕ್ಲೀನ್‌ ಚಿಟ್‌ ನೀಡಿದ್ದಾರೆ. ಜನರು ಇದನ್ನು ನೋಡಿ  ಛೀ..ಥೂ ಅನ್ನುತ್ತಿದ್ದಾರೆ. ಕುಂತಲ್ಲಿ , ನಿಂತಲ್ಲಿ ಜನರು ಬೈಯ್ಯುತ್ತಿದ್ದಾರೆ’ ಎಂದು ಕಿಡಿ ಕಾರಿದರು. 

‘ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಂದಿನ
ಸರ್ಕಾರ ನಾವು ರಚನೆ ಮಾಡುತ್ತೇವೆ. ನಾನು ಪ್ರಮಾಣವಚನ ಮಾಡುವುದು ನಿಶ್ಚಿತ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next