Advertisement

Byndoor Election Results: ಬೈಂದೂರು ಫಲಿತಾಂಶ ಕೇಳಿದ ಸಿದ್ದರಾಮಯ್ಯ

04:32 PM May 14, 2023 | Team Udayavani |

ಕುಂದಾಪುರ: ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರೊಂದಿಗೆ ಕರಾವಳಿ ಜಿಲ್ಲೆಯ ಕ್ಷೇತ್ರಗಳ ಬಗ್ಗೆ ಮಾತನಾಡುತ್ತಾ, ಬೈಂದೂರಿನ ಫಲಿತಾಂಶವನ್ನು ಕುತೂಹಲದಿಂದ ಕೇಳಿದ್ದು ಗಮನಾರ್ಹ.

Advertisement

ದ.ಕ. ಜಿಲ್ಲೆಯಲ್ಲಿ ಕಳೆದ ಬಾರಿ 1 ಗೆದ್ದಿದ್ದ ನಾವು, ಈ ಬಾರಿ ಉಳ್ಳಾಲದೊಂದಿಗೆ ಬೆಳ್ತಂಗಡಿ, ಬಂಟ್ವಾಳ, ಪುತ್ತೂರಿನೊಂದಿಗೆ 3-4 ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ಉಡುಪಿಯಲ್ಲಿ ಬೈಂದೂರು ಸಹಿತ 2 ಸ್ಥಾನ ಗೆಲ್ಲಬಹುದು ಅಂದುಕೊಂಡಿದ್ದೇವು ಎಂದವರು ಮಾಧ್ಯಮವದರೊಂದಿಗೆ ತಿಳಿಸಿದ್ದು, ಈ ವೇಳೆ ಬೈಂದೂರಿನ ಫಲಿತಾಂಶ ಏನಾಯಿತು ಎನ್ನುವುದಾಗಿ ಕೇಳಿದ್ದು, ಬೈಂದೂರು ಸೋತಿದೆ ಎಂದಾಗ ಐದಕ್ಕೆ ಐದು ಹೋಯಿತಾ ಎಂದು ಖೇದ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next