Advertisement

ಆರೋಗ್ಯ ಸರಿಯಿಲ್ಲದೆ ಶಾಂತಿವನಕ್ಕೆ ಬಂದಿದ್ದಲ್ಲ: ಸಿದ್ದರಾಮಯ್ಯ 

03:16 PM Jun 28, 2018 | Team Udayavani |

ಬೆಳ್ತಂಗಡಿ: ಧರ್ಮಸ್ಥಳದ ಶಾಂತಿವನದ  ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಗುರುವಾರ ಡಿಸಾcರ್ಜ್‌ ಆಗಿದ್ದು , ಬಳಿಕ ಶ್ರೀ ಮಂಜುನಾಥೇಶ್ವರನ ಸನ್ನಿಧಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. 

Advertisement

ದೇವಾಲಯದಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿ ನಾನು ಆರೋಗ್ಯ ಸರಿಯಿಲ್ಲದೆ ಚಿಕಿತ್ಸಾಲಕ್ಕೆ ಬಂದಿಲ್ಲ. ಆರೋಗ್ಯ ಚೆನ್ನಾಗೆ ಇತ್ತು. ಸಧೃಡಗೊಳಿಸುವ ಸಲುವಾಗಿ ಬಂದಿದ್ದೆ.ಪ್ರಕೃತಿ ಚಿಕಿತ್ಸಾಲಯದಲ್ಲಿ ವೈದ್ಯರು, ಸಿಬಂದಿಗಳು ಎಲ್ಲರೂ ಚೆನ್ನಾಗೇ ನೋಡಿಕೊಂಡರು ಎಂದರು. 

ಇದೇ ವೇಳೆ ರಾಜಕೀಯದ ಕುರಿತು ಇಲ್ಲಿ ಮಾತನಾಡುವುದಿಲ್ಲ ಎಂದರು. 

ನೀವು ಚೆನ್ನಾಗಿದ್ದರೆ ನಾನೂ ಚೆನ್ನಾಗಿರ್ತೇನೆ 

ತನ್ನನ್ನು ಕಾಣಲು ಬಂದ ಅಭಿಮಾನಿಗಳನ್ನುದ್ದೇಶಿಸಿ ನೀವು ಚೆನ್ನಾಗಿದ್ದರೆ ನಾನೂ ಚೆನ್ನಾಗಿ ಇರ್ತೇನೆ ಎಂದರು. 

Advertisement

ದೇವಾಲಯದಿಂದ ಮಂಗಳೂರಿಗೆ ತೆರಳಿ ಸಂಜೆ ಬೆಂಗಳೂರು ತಲುಪಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next