Advertisement

ಸಿದ್ದರಾಮಯ್ಯ ಜಾತಿ, ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ : ಈಶ್ವರಪ್ಪ

01:24 PM Nov 30, 2019 | Suhan S |

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಮುಪ್ಪು ಬಂದಿದೆ, ದೇಶ, ಸಮಾಜ, ಅಭಿವೃದ್ಧಿಗಾಗಿ ಧ್ಯಾನ ಮಾಡಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Advertisement

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ  ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ. ಇನ್ನಾದರೂ ದೇಶ, ಧರ್ಮ, ಹಿಂದುಳಿದವರು, ದಲಿತರ  ಉದ್ದಾರಕ್ಕೆ ಪ್ರಯತ್ನಿಸಲಿ, ಧ್ಯಾನ‌ ಮಾಡಲಿ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ತಾವು ಹೋದ ಪಕ್ಷವನ್ನು ಛಿದ್ತ ಛಿದ್ರ ಮಾಡುತ್ತಿದ್ದಾರೆ. ಜಾತಿ, ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಅವರು ಖಂಡಿತ ಮುಂದೆ ಮುಖ್ಯಮಂತ್ರಿಯಾಗುವುದಿಲ್ಲ. ಬಿಜೆಪಿ- ಕೆಜೆಪಿ ಯಿಂದಾಗಿ ಅವರು ಮುಖ್ಯಮಂತ್ರಿಯಾದರು. ಈವರೆಗೆ ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿದ್ದು, ಇನ್ನಾದರೂ ಬಿಜೆಪಿಯ ಆಡಳಿತ ನೋಡಿ ಕಲಿಯಲಿ. ವೀರಶೈವ ಲಿಂಗಾಯಿತ ಧರ್ಮ‌ ಒಡೆದರು. ತಮ್ಮನ್ನು ನಂಬಿದವರಿಗೆ ದ್ರೋಹ ಬಗೆದರು ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next