Advertisement

ಸಿದ್ದಾಪುರ: ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್‌ ಪ್ರಚಾರ ಅಬ್ಬರ 

02:57 PM Apr 30, 2018 | Team Udayavani |

ಸಿದ್ದಾಪುರ: ಜೆಡಿಎಸ್‌ ಅಭ್ಯರ್ಥಿ ಶಶಿಭೂಷಣ ಹೆಗಡೆ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ, ಹಳ್ಳಿಬೈಲ್‌, ಬೊಗರಿಮಕ್ಕಿ, ಕಿಲುವಳ್ಳಿ ಊರುಗಳಿಗೆ ತೆರಳಿ ಜನ ಸಂಪರ್ಕ ಸಭೆ ನಡೆಸಿ ಮತಯಾಚಿಸಿದರು. ಕತ್ರಗಾಲ-ಹುಲ್ಕುತ್ರಿ-ಮಾನಿಹೊಳೆ ಸಂಪರ್ಕ ರಸ್ತೆ, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ರಸ್ತೆಯಾಗಿದ್ದು 2012 ರಲ್ಲಿ ರಸ್ತೆ ಪೂರ್ಣಗೊಂಡು ಬಿಲ್‌ ಪಾವತಿಯಾಗಿದೆ. ಆದರೆ ಕೆಲಸ ಅರ್ಧದಷ್ಟು ಮಾತ್ರ ಆಗಿದೆ. ಆಗಿರುವ ಕಾಮಗಾರಿ ತೀವ್ರ ಕಳಪೆಯಾಗಿದೆ ಎಂದು ಜನತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದಾಗ ಶಶಿಭೂಷಣ ಹೆಗಡೆ ಈ ರಸ್ತೆಯ ವಿಚಾರ ಪೂರ್ಣವಾಗಿ ನನ್ನ ಅರಿವಿನಲ್ಲಿದೆ. ನನ್ನನ್ನು ಆಯ್ಕೆಮಾಡಿ ಈ ರಸ್ತೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.

Advertisement

ನಂತರ ಅವರು ಬೇಡ್ಕಣಿ ಗ್ರಾಪಂ ವ್ಯಾಪ್ತಿಯ ಹುಲಿಮನೆ ಬೇಡ್ಕಣಿಗಳಲ್ಲಿ ಬಹಿರಂಗ ಸಭೆ ನಡೆಸಿ ಮತ ಯಾಚಿಸಿದರು. ಶಶಿಭೂಷಣ ಹೆಗಡೆ ಮಾತನಾಡಿ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯತ್ನಿಸುತ್ತೇನೆ ಎಂದರು.

ನಮ್ಮ ಪ್ರಣಾಳಿಕೆಯಲ್ಲಿ ಕಾಣಿಸಿದಂತೆ ರೈತರ ಸಾಲಾ ಮನ್ನಾ, ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ ಮಾಡಲಿಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ನಾನು ನಿಮ್ಮ ಸಂಪರ್ಕದಲ್ಲಿ ಸದಾ ಇರುತ್ತೇನೆ ಎಂದರು. ಕಡಕೇರಿ ಕೋಲ್‌ಸಿರ್ಸಿ, ನಿಡುಗೋಡ ಮತ್ತು ಕಾನಗೋಡಗಳಲ್ಲಿ ಸಭೆ ನಡೆಸಿ ಮತಯಾಚನೆ ಮಾಡಿದರು. ಅವರೊಂದಿಗೆ ಪಕ್ಷದ ಜಿಲ್ಲಾಧ್ಯಕ್ಷ ಬಿ.ಆರ್‌. ನಾಯ್ಕ, ತಾಲೂಕ ಅಧ್ಯಕ್ಷ ಎಸ್‌.ಕೆ ನಾಯ್ಕ, ಮುಖಂಡರಾದ ತಿಮ್ಮಪ್ಪ ಎಂ.ಕೆ, ಶ್ರೀಧರ ಭಟ್ಟ ಗಡಿಹಿತ್ಲು , ಬೂತ್‌ ಕಮೀಟಿ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next