Advertisement

ಗಿರಿನಾಡಿಗೆ ಸಿದ್ಧಗಂಗಾ ಶ್ರೀಗಳ ಒಡನಾಟ

11:37 AM Jan 22, 2019 | Team Udayavani |

ಯಾದಗಿರಿ: ಕಾಯಕ ಯೋಗಿ ತ್ರಿವಿಧ ದಾಸೋಹಿ ನಡೆದಾಡುವ ದೇವರೆಂದೇ ನಾಮಾಂಕಿತಗೊಂಡ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು 2007ರಲ್ಲಿ ಗಿರಿನಾಡಿನ ಸುಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಅಲ್ಲದೇ ಅಂದಿನ ದಿನವೇ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆಂಬ ವಿಷಯ ತಿಳಿದು ಬಂದಿರುವುದು ಇಲ್ಲಿನ ಜನರು ಸದ್ಭಕ್ತರು ಮರೆಯುವಂತಿಲ್ಲ.

Advertisement

ಅಂದು ತುಮಕೂರಿನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿರುವಾಗಲೇ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಸುದ್ದಿ ತಿಳಿದು, ಅಂದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಅವರು, ಯಾವುದೇ ಪ್ರಶಸ್ತಿ, ಹೆಸರಿಗೆ ನಾನು ಕಾಯಕ ಮಾಡುವುದಿಲ್ಲ. ಪ್ರಶಸ್ತಿ ಪಡೆಯಬೇಕೆಂಬ ಹಂಬಲವು ಇಲ್ಲ. ಆದರೆ, ಸಂತ ವಿಶ್ವಾರಾಧ್ಯರ ನೆಲದಲ್ಲಿರುವಾಗ ಪ್ರಶಸ್ತಿ ಘೋಷಣೆಯಾಗಿರುವುದು ಇಲ್ಲಿನ ನೆಲದ ಮಹಿಮೆ ಎಂತಹದ್ದು ಎಂಬುದನ್ನು ತೋರಿಸಿಕೊಡುತ್ತದೆ ಎಂದಿದ್ದರು.

ಅಲ್ಲದೇ, ಅಂದು ಜಾತ್ರಾ ಅಂಗವಾಗಿ ರಾತ್ರಿ ನಡೆದ ಬಸವೇಶ್ವರರ ಕುರಿತ ನಾಟಕವನ್ನು ಮುಂದಿನ ಸಾಲಿನಲ್ಲಿ ಕುಳಿತು ನಾಟಕ ಮುಗಿಯವವರೆಗೂ ಕುಳಿತು ವೀಕ್ಷಿಸಿರುವುದು ವಿಶೇಷವಾಗಿತ್ತು ಎನ್ನಲಾಗಿದೆ. ಮರುದಿನ ಹಲವು ಭಕ್ತರ ಮನೆಗೆ ತೆರಳಿ ಉತ್ಸಾಹದಿಂದಲೇ ಲಿಂಗ ಪೂಜೆ ವಿಧಿ ವಿಧಾನಗಳಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next