Advertisement

ಅನಾಥ ಮಕ್ಕಳ ಬಾಳು ಬೆಳಗಿದ ಸಿದ್ಧಗಂಗಾ ಶ್ರೀ: ಪಾಟೀಲ

11:12 AM Mar 09, 2019 | Team Udayavani |

ಭಾಲ್ಕಿ: ಲಕ್ಷಾಂತರ ಬಡ ಮಕ್ಕಳ ತಂದೆ, ತಾಯಿ, ಗುರುವಾಗಿ ಅವರ ಬಾಳು ಬೆಳಗಿಸಿದ ಸಿದ್ಧಗಂಗಾ ಶ್ರೀಗಳು ಅನಾಥ ಮಕ್ಕಳಿಗೆ ಬೆಳಕಾಗಿದ್ದರು ಎಂದು ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಹೇಳಿದರು.

Advertisement

ತೇಗಂಪೂರ ಗ್ರಾಮದಲ್ಲಿ ನಡೆದ ಲಿಂ. ಡಾ| ಶಿವಕುಮಾರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಮತ್ತು ಸಿದ್ಧಗಂಗಾ ಶ್ರೀ ವೃತ್ತ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀದರ ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿ ಸಂಸ್ಕಾರವಂತರಾಗಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ಸ್ಮರಿಸಿದರು.
 
ಗ್ರಾಮಸ್ಥರಾದ ಶಿವಲಿಂಗಯ್ಯ ಸ್ವಾಮಿ ಮಾತನಾಡಿ, ಸಿದ್ದಗಂಗಾ ಶ್ರೀಗಳ ಸೇವೆ ನಾಡಿಗಲ್ಲದೇ ದೇಶಕ್ಕೂ ಮಾದರಿಯಾಗಿದೆ ಎಂದು ಹೇಳಿದರು. ಮಾಣಿಕರಾವ್‌ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಪಾಲ ಬಿರಾದಾರ, ದೀಲಿಪ ಪಾಟೀಲ, ಶಕುಂತಲಾ ಪಾಟೀಲ, ಹಣಮಂತ ಹುಲೆಪ್ಪ, ನವನಾಥ ಪಾಟೀಲ, ಮನೆಬಾಯಿ, ಪರೆಗಬಾಯಿ ಚೆನ್ನಪ್ಪ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next