Advertisement

ಕೊಲೆಗಾರರ ಪತ್ತೆಗೆ ತಂಡ ರಚನೆ

11:11 AM Oct 27, 2018 | |

ಸೇಡಂ: ತಾಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದ ತಾಯಿ-ಮಗನ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಧೋಳ ಸಿಪಿಐ ಎನ್‌. ವಿರೇಂದ್ರ, ಸುಲೇಪೇಟ ಪಿಎಸ್‌ಐ ಹಾಗೂ ರಟಕಲ್‌ ಪಿಎಸ್‌ಐ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ.

Advertisement

ಶಾಸಕ ತೇಲ್ಕೂರ ಭೇಟಿ: ಕೊಲೆಯಾದವರ ಮನೆಗೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಶೀಘ್ರವೇ ಆರೋಪಿಗಳ ಪತ್ತೆ ಮಾಡಲು ಪೊಲೀಸರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಶಿವಕುಮಾರ ಪಾಟೀಲ ಜಿಕೆ ಇದ್ದರು.

ಶೀಘ್ರವೇ ಆರೋಪಿಗಳ ಬಂಧನ: ಕೊಲೆ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಘಟನೆ ವಿವರ ಮತ್ತು ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮುಧೋಳ ಸಿಪಿಐ ಎನ್‌. ವಿರೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next