Advertisement

ಆಸ್ಪತ್ರೆಯಿಂದ ಮಠಕ್ಕೆ ತೆರಳಿದ ಸಿದ್ಧಗಂಗಾ ಶ್ರೀ

06:00 AM Dec 04, 2018 | Team Udayavani |

ಬೆಂಗಳೂರು: ರಕ್ತ ಹಾಗೂ ಪಿತ್ತನಾಳದಲ್ಲಿ  ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ನಗರದ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ  ಚಿಕಿತ್ಸೆಗಾಗಿ ದಾಖಲಾಗಿದ್ದ  ತುಮಕೂರು ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ ಅವರನ್ನು ಸೋಮವಾರ ಬೆಳಗ್ಗೆ ಡಿಸಾcರ್ಜ್‌ ಮಾಡಲಾಗಿದೆ.  ಸೋಮವಾರ ಬೆಳಗ್ಗೆ ವೈದ್ಯರು ಮತ್ತೂಮ್ಮೆ ರಕ್ತ ಪರೀಕ್ಷೆ, ಸ್ಕ್ಯಾನಿಂಗ್‌ ಹಾಗೂ ಅಲ್ಟ್ರಾಸೌಂಡ್‌ ಪರೀಕ್ಷೆಗಳನ್ನು ನಡೆಸಿ, ವರದಿಯಲ್ಲಿ ಆರೋಗ್ಯ ಸ್ಥಿತಿಯನ್ನು ಖಚಿತ ಪಡಿಸಿಕೊಂಡು ಅನಂತರ ಮಠಕ್ಕೆ ಕಳುಹಿಸಿಕೊಟ್ಟರು.

Advertisement

ಆಸ್ಪತ್ರೆಯ ಡಾ| ಬಿ.ಎಸ್‌.ರವೀಂದ್ರ ಮಾತನಾಡಿ, ಬೆಳಗ್ಗೆ ನಡೆಸಿದ ಪರೀಕ್ಷೆಗಳ ವರದಿಯಿಂದ ಶ್ರೀಗಳಿಗೆ ಹೊಸದಾಗಿ ಅಳವಡಿಸಿರುವ ಎರಡು ಸ್ಟಂಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಜತೆಗೆ ರಕ್ತದಲ್ಲಿನ ಸೋಂಕು ಕಡಿಮೆಯಾಗಿದ್ದು, ಕಿಡ್ನಿಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿವೆ. ಸೋಂಕು ಸಂಪೂರ್ಣ ವಾಸಿಯಾಗಬೇಕಿದ್ದು, ಕೆಲವು ದಿನ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಆ್ಯಂಟಿಬಯೋಟಿಕ್‌ ಮುಂದುವರಿಸುವಂತೆ ಸೂಚಿಸಲಾಗಿದೆ. ತುಮಕೂರಿಗೆ ತೆರಳಿದ ಬಳಿಕ ಮಠದಲ್ಲಿ ಸಿದ್ಧಗಂಗಾ ಆಸ್ಪತ್ರೆ ವೈದ್ಯರ ತಂಡ ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲಿದೆ ಎಂದು ಹೇಳಿದರು. 
 

Advertisement

Udayavani is now on Telegram. Click here to join our channel and stay updated with the latest news.

Next