Advertisement

ಪ್ರತೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಿದ್ಧಗಂಗಾ ಶ್ರೀ ಅಸಮಧಾನ 

11:22 AM Dec 29, 2017 | |

ತುಮಕೂರು: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ತೀವ್ರ ಗೊಂಡಿರುವ ವೇಳೆಯಲ್ಲಿ ಹೋರಾಟಗಾರರಿಗೆ ತೀವ್ರ ಹಿನ್ನಡೆ ಎನ್ನುವಂತೆ ಸಿದ್ಧಗಂಗಾ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಅವರು  ಶ್ರೀಶೈಲ ಜಗದ್ಗುರುಗಳ ಬಳಿ  ಹೋರಾಟದ ಬಗ್ಗೆ ಅಸಮಾಧಾನ ಹೊರ ಹಾಕಿರುವ ಬಗ್ಗೆ ವರದಿಯಾಗಿದೆ. 

Advertisement

ಗುರುವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ  ಸಿದ್ಧಗಂಗಾ ಶ್ರೀಗಳ ಜೊತೆ ಕೆಲ ಕಾಲ ಮಾತುಕತೆ ನಡೆಸಿದ ಶ್ರೀಶೈಲ ಪೀಠದ ಜಗದ್ಗುರು ಪಂಡಿತಾರಾಧ್ಯ ಸ್ವಾಮೀಜಿ ಅವರು  ಮಾಧ್ಯಮಗಳ ಮುಂದೆ ಮಾತನಾಡಿ ಶ್ರೀಗಳು ಅಸಮಧಾನ ಹೊರಹಾಕಿರುವುದಾಗಿ  ಹೇಳಿಕೊಂಡಿದ್ದಾರೆ. 

ವೀರಶೈವ ಗ್ರಾಂಥಿಕ ಶಬ್ಧ,ಲಿಂಗಾಯತ ಗ್ರಾಮೀಣ ಶಬ್ಧ.ಹೀಗಾಗಿ ಎರಡೂ ಒಂದೇ ಎನ್ನುವ ಅಭಿಪ್ರಾಯ ವನ್ನು ಶ್ರೀಗಳು ವ್ಯಕ್ತ ಪಡಿಸಿರುವುದಾಗಿ ಶ್ರೀಶೈಲ ಶ್ರೀಗಗಳು  ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next