Advertisement

ಆರೋಗ್ಯ ಸಿಬಂದಿಯಲ್ಲಿ  ಸಂವಹನ ವೃದ್ಧಿಸಬೇಕು: ಡಾ|ಬಕ್ಷಿ ಕರೆ

01:16 PM Mar 25, 2017 | Team Udayavani |

ಉಡುಪಿ: ಆರೋಗ್ಯ ಸಿಬಂದಿ ಮತ್ತು ಸಂವಹನ ಕ್ಷೇತ್ರದಲ್ಲಿರುವ ಜನರು ಪರಸ್ಪರ ಬೆರೆತು ಸಂವಹನ ವೃದ್ಧಿಸಬೇಕು ಎಂದು ಮಣಿಪಾಲ ಆಸ್ಪತ್ರೆ ಆಡಳಿತ ನಿರ್ದೇಶಕ ಹಾಗೂ ಸಿಇಒ ಡಾ| ಅಜಯ್‌ ಭಕ್ಷಿ ಹೇಳಿದರು.

Advertisement

ಅವರು ಮಾ. 24ರಂದು ಮಣಿಪಾಲ ಸ್ಕೂಲ್‌ ಆಫ್ ಕಮ್ಯುನಿಕೇಶನ್‌ ಕಾಲೇಜಿನಲ್ಲಿ ಆರಂಭವಾದ ಎರಡು ದಿನಗಳ ಆರೋಗ್ಯ ವಿಷಯಗಳ ಕುರಿತ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿರುವ ಅನೇಕರಿಗೆ ಸಮರ್ಥವಾಗಿ ಸಂವಹನ ನಡೆಸುವ ಕೌಶಲ ಹೆಚ್ಚಿಸುವಲ್ಲಿ ಈ ಎರಡು ದಿನಗಳ ಕಾರ್ಯಕ್ರಮ ಅತ್ಯಂತ ಫ‌ಲಪ್ರದವಾಗಲಿದೆ ಎಂದು ಅವರು ಹೇಳಿದರು.

ಆರೋಗ್ಯ ಸಂವಹನ ಕ್ಷೇತ್ರದಲ್ಲಾಗುತ್ತಿರುವ ನವನವೀನ ಆವಿಷ್ಕಾರ ಸಾಮಾನ್ಯರಿಗೆ ತಲುಪುವಂತೆ ಮಾಡುವ ವಿಶೇಷ ಉದ್ದೇಶ ಈ ಸಮ್ಮೇಳನದ್ದಾಗಿದೆ. ಸಂವಹನ ಕ್ಷೇತ್ರದಲ್ಲಿರುವ ಮಂದಿಗೆ ಜಾಗೃತಿ ಮೂಡಿಸಲು ಇದು ಸಹಕಾರಿಯಾಗಲಿದೆ ಎಂದು ಸ್ಕೂಲ್‌ ಆಫ್ ಕಮ್ಯುನಿಕೇಶನ್‌ ನಿರ್ದೇಶಕರಾದ ಡಾ| ನಂದಿನಿ ಲಕ್ಷ್ಮೀಕಾಂತ ಹೇಳಿದರು.

ಸ್ಕೂಲ್‌ ಆಫ್ ಕಮ್ಯುನಿಕೇಶನ್‌ನ ಸಹಾಯಕ ನಿರ್ದೇಶಕರಾದ ಡಾ| ಪದ್ಮಾರಾಣಿ ಉಪಸ್ಥಿತರಿದ್ದರು.ಸಂವಹನ ವಿದ್ಯಾರ್ಥಿಗಳಾದ ರಿಚಾ ಸ್ವಾಗತಿಸಿ, ನೇಹಾ ವಂದಿಸಿದರು. ತೇಜಶ್ರೀ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next