Advertisement

ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನದ ಅಂಗವಾಗಿ ಕುಂಜತಬೈಲ್ ನಲ್ಲಿ ನೇಜಿ ನೆಡುವ ಕಾರ್ಯಕ್ರಮ

09:26 AM Jul 08, 2021 | Team Udayavani |

ಸುರತ್ಕಲ್: ಕೃಷಿಗೆ ಉತ್ತೇಜನ ಕೊಡುವ ಸಲುವಾಗಿ ಜನ ಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನದ ಅಂಗವಾಗಿ ಮಂಗಳೂರು ಉತ್ತರ ಮಂಡಲದ ಮಹಿಳೆಯರು ಕುಂಜತಬೈಲ್ ಗ್ರಾಮದ ಏರ್ಮಜಲ್ ಗುತ್ತಿನ ಬಾರೆಮಾರ್ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement

ಮಂಗಳೂರಿನ ಉಪ ಮೇಯರ್ ಸುಮಂಗಲಾ, ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿ ಪೂಜಾ ಪ್ರಶಾಂತ್ ಪೈ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪೂರ್ಣಿಮಾ, ಮಂಡಲ ಉಪಾಧ್ಯಕ್ಷೆ ಬಬಿತಾ ರವೀಂದ್ರ, ಅಮೃತ್ ಲಾಲ್, ಮಂಡಲ ಕಾರ್ಯದರ್ಶಿ ಚಂದ್ರಿಕಾ ಪ್ರಭಾಕರ್, ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷ ಕುಶಲ ವಿಶುಕುಮಾರ್, ಪ್ರಧಾನ ಕಾರ್ಯದರ್ಶಿ ವೀಣಾ ನಾಯಕ್, ಸದಸ್ಯರಾದ ಸಪ್ನ, ಬೇಬಿ, ಶೈಲಜಾ , ಸವಿತಾ, ವನಿತಾ ರಮೇಶ್, ಊರಿನ ಬಂಧುಗಳು ಹಾಗೂ ನೇಜಿ ಕೆಲಸಗಾರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜಿಲ್ಲಾ ಮಾಧ್ಯಮ ಪ್ರಮುಖ ರಣ್ ದೀಪ್ ಕಾಂಚನ್, ಜಗದೀಶ್ ಮುರ ಸಹಕರಿಸಿದರು.ಈ ಕಾರ್ಯಕ್ರಮದಲ್ಲಿ ಒಟ್ಟು 67 ಜನ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next