Advertisement

“ರಾಮನ ಅವತಾರ’ಕ್ಕೆ ಶುಭ್ರ, ಚೈತ್ರಾ ಸೇರ್ಪಡೆ

05:26 AM Feb 18, 2019 | |

“ರಾಮನ ಅವತಾರ’ ಎಂಬ ಸಿನಿಮಾವೊಂದು ಆರಂಭವಾಗುತ್ತಿದೆ ಎಂಬ ವಿಚಾರ ನಿಮಗೆ ಗೊತ್ತಿರಬಹುದು. ಮೂವರು ಹೀರೋಗಳಿರುವ ಈ ಚಿತ್ರಕ್ಕೆ ಈಗ ನಾಯಕಿಯರ ಆಯ್ಕೆಯಾಗಿದೆ. ಈಗಾಗಲೇ ಚಿತ್ರಕ್ಕೆ ಪ್ರಣೀತಾ ನಾಯಕಿಯಾಗಿ ಆಯ್ಕೆಯಾಗಿದ್ದು, ಇನ್ನಿಬ್ಬರು ನಾಯಕಿಯರ ತಲಾಶ್‌ನಲ್ಲಿತ್ತು ಚಿತ್ರತಂಡ. ಈಗ ಚಿತ್ರಕ್ಕೆ ಇಬ್ಬರು ನಾಯಕಿಯರು ಸಿಕ್ಕಿದ್ದಾರೆ. ಶುಭ್ರ ಅಯ್ಯಪ್ಪ ಹಾಗೂ ಚೈತ್ರಾ ಈಗ “ರಾಮನ ಅವತಾರ’ ತಂಡ ಸೇರಿಕೊಂಡಿದ್ದಾರೆ.

Advertisement

ಯಾವ ಶುಭ್ರ ಎಂದು ನೀವು ಕೇಳಿದರೆ ಶಿವರಾಜಕುಮಾರ್‌ ನಾಯಕರಾಗಿರುವ “ವಜ್ರಕಾಯ’ ಚಿತ್ರದ ಬಗ್ಗೆ ಹೇಳಬೇಕಾಗುತ್ತದೆ. ಆ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದ ಶುಭ್ರ ಅಯ್ಯಪ್ಪ, ಆ ನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸುನಿ ನಿರ್ದೇಶನದ “ಜಾನ್‌ ಸೀನ’ ಚಿತ್ರದಲ್ಲಿ ನಟಿಸಿದ್ದರೂ, ಆ ಚಿತ್ರ ಇನ್ನೂ ತೆರೆಕಂಡಿಲ್ಲ. ಈಗ ಶುಭ್ರ “ರಾಮನ ಅವತಾರ’ ತಂಡ ಸೇರಿಕೊಂಡಿದ್ದಾರೆ.

ಇನ್ನು, ಚೈತ್ರಾ ಕೂಡಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. “ಮಹಿರ’ ಚಿತ್ರದಲ್ಲಿ ನಾಯಕಿಯಾಗಿರುವ ಚೈತ್ರಾಗೆ ಇಲ್ಲಿ ಅವಕಾಶ ಸಿಕ್ಕಿದೆ.  ಚಿತ್ರದಲ್ಲಿ ರಿಷಿ, ದಾನಿಶ್‌ ಸೇಠ್ ಹಾಗೂ ರಾಜ್‌ ಬಿ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ವಿಕಾಸ್‌ ಪಂಪಾಪತಿ ಹಾಗೂ ವಿನಯ್‌ ಪಂಪಾಪತಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ “ರಾಮನ ಅವತಾರ’ ಅಂತಿದ್ದರೂ, ಪುರಾಣ-ಪುಣ್ಯ ಕಥೆಗಳಲ್ಲಿ ಬರುವ ರಾಮನಿಗೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ!

ಇದು ಪಕ್ಕಾ ಇಂದಿನ ಜಮಾನದ ಕಥೆ, ಕಲಿಯುಗದ ಕಥೆ. ಈ ಕಥೆಯೊಳಗೆ ರಾಮ ಎಂಬ ಪಾತ್ರವೊಂದು ಬರುತ್ತದೆ. ಅದಕ್ಕಾಗಿ ಚಿತ್ರದ ಶೀರ್ಷಿಕೆಯನ್ನು “ರಾಮನ ಅವತಾರ’ ಅಂತ ಇಟ್ಟಿದ್ದೇವೆ ಎನ್ನುತ್ತದೆ ಚಿತ್ರತಂಡ. ಚಿತ್ರದಲ್ಲಿ  ರಿಷಿ ರಾಮನಾಗಿ, “ಹಂಬಲ್‌ ಪೊಲಿಟಿಶಿಯನ್‌’ ಚಿತ್ರ ಖ್ಯಾತಿಯ ದಾನೀಶ್‌ ಸೇಠ್ ಫ್ಲೈಯಿಂಗ್‌ ಮ್ಯಾನ್‌ ಹಾಗೂ ರಾಜ್‌ ಬಿ. ಶೆಟ್ಟಿ ಜೇಮ್ಸ್ ಬಾಂಡ್‌ ಗೆಟಪ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

“ರಾಮನ ಅವತಾರ’ ಚಿತ್ರದ ಕಥೆ ಡಾರ್ಕ್‌ ಕಾಮಿಡಿ ಜಾನರ್‌ನಲ್ಲಿ ಸಾಗುತ್ತದೆ. ಚಿತ್ರದಲ್ಲಿ ಪ್ರಮುಖ ಪಾತ್ರವೊಂದು ಟ್ರಾವೆಲ್‌ ಮಾಡುತ್ತಾ ಹೋಗುತ್ತದೆ. ಉಳಿದ ಪಾತ್ರಗಳು ಅದನ್ನು ಸಂಧಿಸುತ್ತ ಹೋಗುತ್ತವೆ. ಅಂತಿಮವಾಗಿ ಏನಾಗಲಿದೆ ಅನ್ನೋದೆ ಚಿತ್ರದ ಸಸ್ಪೆನ್ಸ್‌ ಮತ್ತು ಕ್ಲೈಮ್ಯಾಕ್‌ ಅಂತೆ. ಬೆಂಗಳೂರು, ಚಿತ್ರದುರ್ಗ, ಮಂಗಳೂರು, ಗೋವಾ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next