Advertisement

ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿತ್ರನಟಿ ಶುಭಾ ಪೂಂಜ

02:22 PM Feb 25, 2017 | Harsha Rao |

ಶಿರ್ವ: ಶಿರ್ವ ಸಮೀಪದ ಪ್ರಕೃತಿದತ್ತ ಕಾಡಿನ ಮಧ್ಯೆ ಇರುವ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಕನ್ನಡ,ತಮಿಳು ಚಿತ್ರನಟಿ ಶುಭಾ ಪೂಂಜ ಪಾಲ್ಗೊಂಡಿದ್ದರು.
ಕನ್ನಡ ಚಿತ್ರಗಳಾದ ಮಗಳೇ ಐ ಲವ್‌ ಯೂ, ನವೆಂಬರ್‌ 19, ತಾತನ ತಿಥಿ, ವಿಜಯ ರಾಘವೇಂದ್ರ ಜೊತೆ ಇನ್ನೂ ಹೆಸರಿಡದ ಚಿತ್ರ ಹಾಗೂ ಮಾತಂಗಿ ತಮಿಳು ಚಿತ್ರ ಸೇರಿ 5 ಚಿತ್ರಗಳ ಚಿತ್ರೀಕರಣದಲ್ಲಿ ಬಿಡುವಿಲ್ಲದ ನಟಿ ಶುಭಾ ಪೂಂಜಾ. ಈಕೆಯ ಮಾತಂಗಿ ತಮಿಳು ಚಿತ್ರ ಮುಂದಿನ ತಿಂಗಳು ತೆರೆ ಕಾಣಲಿದೆ.

Advertisement

ಉದಯ ಟಿ.ವಿ.ಯಲ್ಲಿ ಪ್ರಸಾರ ವಾಗುವ ಸೂಪರ್‌ ಕಬಡ್ಡಿಯಲ್ಲಿ ಸೆಮಿಫೈನಲ್‌ ಹಂತದಲ್ಲಿರುವ  ರೆಬೆಲ್‌ ತಂಡದ ಮಾಲಕಿಯಾಗಿರುವ ಈಕೆ ಬಿಡುವಿಲ್ಲದಿದ್ದರೂ ಪ್ರತಿವರ್ಷದಂತೆ ಈ ಬಾರಿಯೂ ತನ್ನ ತಾಯಿಮನೆ ಪಿಲಾರು ಮಜಲಬೆಟ್ಟು ಬೀಡುವಿನ ಮನೆತನದ ಆಡಳಿತಕ್ಕೊಳಪಟ್ಟ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿವರಾತ್ರಿ ಮಹೋತ್ಸವದ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರಿನ ಉದ್ಯಮಿ ತಂದೆ ಭವಾನಿ ಶಂಕರ ಪೂಂಜಾ, ತಾಯಿ ಯೋಗಿನಿ ಪೂಂಜಾ ಹಾಗೂ ಸಹೋದರ ರಂಜಿತ್‌ ಪೂಂಜಾ ಹಾಗೂ ಕುಟುಂಬಿಕರೊಂದಿಗೆ ಭಾಗವಹಿಸಿ ಪ್ರಸಾದ ಸೀÌಕರಿಸಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ  ಶುಭಾ ಪೂಂಜಾ ಅವರ ಸೋದರ ಮಾವ ಶ್ರೀ ದೇಗುಲದ ಆಡಳಿತ ಮೊಕೇ¤ಸರ ನ್ಯಾಯವಾದಿ ರಾಮಕೃಷ್ಣ ಶೆಟ್ಟಿ, ಜೀವಂಧರ ಬಲ್ಲಾಳ್‌, ಅರ್ಚಕ ಶ್ರೀನಿವಾಸ ಭಟ್‌, ಶರತ್‌ ಶೆಟ್ಟಿ, ಕರುಣಾಕರ ಶೆಟ್ಟಿ, ರಾಮದಾಸ್‌ ಶೆಣೈ, ಅರುಣ್‌ ಡಿ’ಸೋಜಾ, ಉಪನ್ಯಾಸಕ ಅನಂತ ಮೂಡಿತ್ತಾಯ ಉಪಸ್ಥಿತರಿದ್ದರು.ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next