Advertisement

ಶುಭವರ್ಣ ಪ್ರಶಸ್ತಿ ಪ್ರದಾನ

12:42 PM Nov 17, 2017 | |

ಮರಕಡ: ಇಲ್ಲಿನ ಶುಭ ವರ್ಣ ಯಕ್ಷ ಸಂಪದ ವತಿಯಿಂದ ಕಟೀಲು ಮೇಳದ ಹಿರಿಯ ಭಾಗವತ ಕೊರಗಪ್ಪ ನಾೖಕ್‌ ಅವರಿಗೆ ಮರಕಡ ಕುಮೇರುಮನೆ ಲಿಂಗಮ್ಮ ತನಿಯಪ್ಪ ಕೋಟ್ಯಾನ್‌ ಸ್ಮರಣಾರ್ಥ ಶುಭವರ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಟೀಲು ಕ್ಷೇತ್ರದ ವಿದ್ವಾನ್‌ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಿದರು.

Advertisement

ಗೌರವ
ಮರಕಡದ ಹಿರಿಯ ಜೋತಿಷಿ ಎಂ.ಸುಬ್ರಾಯ ಭಟ್‌ ಅವರಿಗೆ ಗೌರವಾರ್ಪಣೆ, ಹಿರಿಯ ಯಕ್ಷಗುರು ಶಿವರಾಮ ಪಣಂಬೂರು ಅವರಿಗೆ ಅಭಿವಂದನೆ ಹಾಗೂ ಶಿವಾನಂದ ಶೆಟ್ಟಿ ಪೆರ್ಲ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮುದ್ದಣ ಪ್ರಶಸ್ತಿ ವಿತರಣೆ
ಜತೆಗೆ ಮುದ್ದಣ ಪ್ರತಿಷ್ಠಾನದಿಂದ ಭಾಗವತ ಅಂಡಾಲ ದೇವಿಪ್ರಸಾದ ಶೆಟ್ಟಿ ಅವರಿಗೆ ಮುದ್ದಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯಕ್ಷಗಾನ ಪ್ರದರ್ಶನ
ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಲಕ್ಷ್ಮಣಕುಮಾರ್‌ ಮರಕಡ ನಿರ್ದೇಶನದಲ್ಲಿ ಶ್ರೀ ಕೃಷ್ಣ ಪಾರಿಜಾತ- ನರಕಾಸುರ ವಧೆ- ಗರುಡ ಗರ್ವ ಭಂಗ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು.

ತಾರಾನಾಥ ವರ್ಕಾಡಿ, ಸುಣ್ಣಂಬಳ ವಿಶ್ವೇಶ್ವರ ಭಟ್‌, ಸುಧಾಕರ ಸಾಲ್ಯಾನ್‌, ಪ್ರಭಾಕರ ಸುವರ್ಣ ದುಬೈ, ದೇಲಂತ ಮಜಲು ಸುಬ್ರಹ್ಮಣ್ಯ ಭಟ್‌, ಕಿಶೋರ್‌ ರೈ ಮರಕಡ, ವಾಸು ಬಾಯಾರ್‌, ಸೀತಾರಾಮ ಶೆಟ್ಟಿ ಕುತ್ತೆತ್ತೂರು, ಲಕ್ಷ್ಮಣ ಶೆಟ್ಟಿಗಾರ್‌ ದುಬೈ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next