Advertisement
ಮಠದ ಪಟ್ಟದ ದೇವರಾದ ಯೋಗನೃಸಿಂಹ ಮತ್ತು ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿದ ಅನಂತರ ಗೋಪೂಜೆ ಮಾಡಿ ಗೋವಿನ ಕಾಲಿಗೆರಗಿ ಸಾಷ್ಟಾಂಗ ನಮಸ್ಕಾರ ಮಾಡುವುದು ಶ್ರೀಪಾದರ ನಿತ್ಯ ದಿನಚರಿ. ಗೋವಿನ ಬಗ್ಗೆ ಅದಮ್ಯ ಪ್ರೀತಿ ಹೊಂದಿರುವ ಶ್ರೀಪಾದರು ಮಠದ ಗೋಶಾಲೆಯಲ್ಲಿ ಸಾಹಿವಾಲ್, ಗೀರ್, ಓಂಗೋರ್, ಹಳ್ಳಿಕಾರ್, ಮಲೆನಾಡು ಗಿಡ್ಡ ಮೊದಲಾದ ದೇಸಿ ತಳಿಯ ಗೋವುಗಳನ್ನು ಪೋಷಿಸುತ್ತಿದ್ದಾರೆ. ಹಿಂದಿನ ಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ದೇಸಿ ಗೋವುಗಳ ಸಂರಕ್ಷಣೆ, ಸಂವರ್ಧನೆ ಧ್ಯೇಯವಾಗಿರಿಸಿಕೊಂಡು ಕೃಷ್ಣಮಠದಲ್ಲಿ ಪ್ರಥಮ ಗೋ ಸಮ್ಮೇಳನವನ್ನೂ ಆಯೋಜಿಸಿದ್ದರು.
Advertisement
ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ
09:24 PM Jul 09, 2020 | Sriram |
Advertisement
Udayavani is now on Telegram. Click here to join our channel and stay updated with the latest news.