Advertisement

Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ

01:36 AM Oct 08, 2024 | Team Udayavani |

ಚಿಕ್ಕಮಗಳೂರು: ಶ್ರೀರಾಮ ಸೇನೆ ವತಿಯಿಂದ 21ನೇ ವರ್ಷದ ದತ್ತಮಾಲಾ ಅಭಿಯಾನವನ್ನು ನ. 4ರಿಂದ 10ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ನಗರದ ಶಂಕರ ಮಠದಲ್ಲಿ ದತ್ತಮಾಲಾಧಾರಣೆ ಕಾರ್ಯಕ್ರಮ ನಡೆಯಲಿದೆ. ದತ್ತಭಕ್ತರು ಅಂದು ರಾಜ್ಯಾದ್ಯಂತ ಮಾರಾಧಾರಣೆ ಮಾಡಲಿದ್ದಾರೆ. 7ರಂದು ಶಂಕರ ಮಠದಲ್ಲಿ ಸಂಜೆ 7 ಗಂಟೆಗೆ ಹಾಗೂ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ದತ್ತ ದೀಪೋತ್ಸವ ನಡೆಯಲಿದೆ. ನ. 9ರಂದು ಚಿಕ್ಕಮಗಳೂರು ನಗರದಲ್ಲಿ ಪಡಿಸಂಗ್ರಹ, 10ರಂದು ಶಂಕರಮಠದ ಮುಂಭಾಗದಲ್ಲಿ ಧರ್ಮಸಭೆ, ಅನಂತರ ಶೋಭಾಯಾತ್ರೆ ನಡೆಯಲಿದೆ. ಅದೇ ದಿನ ಶ್ರೀರಾಮ ಕಾರ್ಯಕರ್ತರು ಸೇರಿದಂತೆ ದತ್ತಭಕ್ತರು ದತ್ತಪೀಠಕ್ಕೆ ತೆರಳ ದತ್ತಪಾದುಕೆ ದರ್ಶನ ಪಡೆದುಕೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next