Advertisement

Belagavi; ಲೋಕಸಭೆ ಚುನಾವಣೆಯ ಫಲಿತಾಂಶದ ಕುರಿತು ಭವಿಷ್ಯವಾಣಿ ನುಡಿದ ಶ್ರೀ ಲೋಕನಾಥ ಸ್ವಾಮೀಜಿ

01:19 PM May 23, 2024 | Team Udayavani |

ಬೆಳಗಾವಿ: ಲೋಕಸಭೆ ಚುನಾವಣೆಯ ಫಲಿತಾಂಶದ ಕುರಿತು ಶ್ರೀ ರಾಮರಾಜ್ಯ ಸರ್ವಸಿದ್ಧಿ ಶಕ್ತಿ‌ಪೀಠದ ಪೀಠಾಧಿಪತಿ ಶ್ರೀ ಲೋಕನಾಥ ಸ್ವಾಮೀಜಿ ಭವಿಷ್ಯವಾಣಿ ನುಡಿದಿದ್ದಾರೆ.

Advertisement

ಅರಳಿದ ಗಿಡದಲ್ಲಿ ಮೊಗ್ಗಿನ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ. ಅಂದರೆ ಕಳೆದ ಬಾರಿಯ ಲೋಕಸಭೆಯ ಫಲಿತಾಂಶಕ್ಕಿಂತ ಈ ಬಾರಿ ಬಿಜೆಪಿಗೆ ಇನ್ನೂ ಹತ್ತು ಸೀಟ್‌ ಗಳು ಹೆಚ್ವು ಬರಲಿವೆ ಎಂದಿದ್ದಾರೆ.

ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯವಾಣಿ ನುಡಿದ ಅವರು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕುತ್ತು ಎಂದರ್ಥದಲ್ಲಿ ‘ನಾಡಿನ ದೊರೆಯ ಸಿಂಹಾಸನಕ್ಕೆ ತೊಂದರೆ ಉಂಟಾಗಬಹುದು’ ಎಂದಿದ್ದಾರೆ.

ರಾಮರಾಜ್ಯ ಸರ್ವಶಕ್ತಿ ಪೀಠವು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next