Advertisement

ಕೃಷ್ಣಾಪುರ ಶ್ರೀ ಪರ್ಯಾಯ ಸಂಚಾರ

01:38 AM Nov 20, 2021 | Team Udayavani |

ಉಡುಪಿ: ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮೊದಲ ಸುತ್ತಿನ ಪರ್ಯಾಯ ಸಂಚಾರ ಮುಗಿಸಿ ಮತ್ತೆ ದಕ್ಷಿಣ ಭಾರತದ ತೀರ್ಥ ಕ್ಷೇತ್ರ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ನ. 22ರಂದು ಈ ಪ್ರವಾಸ ಆರಂಭವಾಗಲಿದೆ. ಕರ್ನಾಟಕ, ಚೆನ್ನೈ ಹೊರತುಪಡಿಸಿ ಉಳಿದ ತಮಿಳುನಾಡು ಭಾಗ, ಕೇರಳ, ಮಹಾರಾಷ್ಟ್ರ ಸಂಚಾರದಲ್ಲಿ ಮಧುರೆ, ಚಿದಂಬರಂ, ರಾಮೇಶ್ವರ, ಶ್ರೀರಂಗಂ, ತಿರುವನಂತಪುರ, ಕೊಚ್ಚಿ, ಗುರುವಾಯೂರು, ಶುಚೀಂದ್ರಂ ಮೊದಲಾದ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

ಡಿ. 17ರಂದು ಹಿಂದಿರುಗುವ ಶ್ರೀಗಳು ಅಂದೇ ಪಟ್ಟದ ದೇವರ ಸಹಿತ ಪ್ರವಾಸ ಹೊರಡುವರು. ಜ. 10ರಂದು ಪುರಪ್ರವೇಶ ನಡೆಯಲಿದೆ.

ಇದನ್ನೂ ಓದಿ:ಟೀಮ್‌ ಇಂಡಿಯಾ ಸರಣಿ ಜಯಭೇರಿ

ಡಿ. 8: ಭತ್ತ ಮುಹೂರ್ತ
ಪರ್ಯಾಯ ಪೂರ್ವಭಾವಿಯಾದ ಭತ್ತ ಮುಹೂರ್ತವು ಡಿ. 8ರ ಬೆಳಗ್ಗೆ ನಡೆಯಲಿದೆ. ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತಗಳು ನಡೆದಿವೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next