Advertisement

ಶ್ರೀ ಕಾಶೀ ಮಠಾಧೀಶ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ದಿನಾಚರಣೆ

03:20 PM Apr 25, 2019 | Team Udayavani |

ಮುಂಬಯಿ: ಜಿಎಸ್‌ಬಿ ಸಮಾಜದ ಗುರುವರ್ಯದ ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ದಿನಾಚರಣೆಯು ಎ. 20 ರಂದು ವಾಲ್ಕೇಶ್ವರದ ಶ್ರೀ ಕಾಶೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 9ರಿಂದ ನೈರ್ಮಲ್ಯ ವಿಸರ್ಜನೆ, ಗಂಗಾಜಲ, ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ ನಡೆಯಿತು. ಪ್ರಾತಃಕಾಲದ ಶೋಡಷೋಪಚಾರದ ಪೂಜೆಯ ಬಳಿಕ ಸಮಾಧಿ ಮೇಲಿನ ಹನುಮಂತ ದೇವರ ಗಂಧಲೇಪನ ನಡೆಯಿತು. ಇದೇ ಸಂದರ್ಭದಲ್ಲಿ ಜಿಎಸ್‌ಬಿ ಸಭಾ ಮುಂಬಯಿ ಇವರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅನಂತರ ಪ್ರಸಾದ ವಿತರಣೆ, ಸಮಾರಾಧನೆ ನಡೆಯಿತು. ಮಧ್ಯಾಹ್ನ 12ರಿಂದ ಪುಷ್ಪಾಲಂಕಾರ ಪೂಜೆ, ಮಹಾಆರತಿ ಪೂಜೆ ಸಂಪನ್ನಗೊಂಡಿತು. ಬಳಿಕ ಸರ್ವರಿಗೂ ಪ್ರಸಾದ ವಿತರಣೆ ನಡೆದು ಸಮಾರಾಧನೆ ಜರಗಿತು. ಸಂಜೆ 6ರಿಂದ ದೀಪಾಲಂಕಾರ, ಶ್ರೀ ಭುವನೇಂದ್ರ ಕೃಪಾಪೋಷಿತ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ರಾತ್ರಿ 8 ರಿಂದ ವಸಂತ ಪೂಜೆ ನಡೆಯಿತು.

ಅನಂತರ ಗುರುಗಳ ಗುಣಗಾನ ಜರಗಿತು. ಪೂಜ್ಯ ಗುರುವರ್ಯರ ಪ್ರವಚನದ ಸಂದರ್ಭ ಅಪಾರ ಶಿಷ್ಯವರ್ಗದವರು ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ರಾತ್ರಿ ಶ್ರೀ ಕಾಶೀಮಠದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಕಾಶೀ ಮಠದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಮುಂಬಯಿಯ ಜಿಎಸ್‌ಬಿ ಸಮಾಜ ಬಾಂಧವರು, ಸಮಾಜದ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸ್ವಯಂಸೇವಕರು ಇನ್ನಿತರರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next