Advertisement

ಭುಜದ ನೋವು ಗುಣವಾಗಿದೆ, ಐಪಿಎಲ್‌ ಆಡುವುದು ಖಚಿತ : ಅಯ್ಯರ್‌

11:32 PM Jul 05, 2021 | Team Udayavani |

ಮುಂಬಯಿ : ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ನೋವಿಗೆ ಸಿಲುಕಿ ಐಪಿಎಲ್‌ನಿಂದ ಹೊರಗುಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಇದೀಗ ಚೇತರಿಸಿಕೊಂಡಿದ್ದಾರೆ. ಯುಎಇಯಲ್ಲಿ ಮುಂದುವರಿಯಲಿರುವ ಐಪಿಎಲ್‌ನಲ್ಲಿ ಆಡುವುದನ್ನು ಖಚಿತಪಡಿಸಿದ್ದಾರೆ.

Advertisement

“ನನ್ನ ಭುಜದ ನೋವು ಗುಣವಾಗಿದೆ. ಈಗ ನಾನು ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳುವ ಅಂತಿಮ ಹಂತದ ಪ್ರಕ್ರಿಯೆಗಳಲ್ಲಿ ತೊಡಗಿದ್ದೇನೆ. ಇದು ಒಂದು ತಿಂಗಳ ಕಾಲ ನಡೆಯಲಿದೆ. ಇದೇ ಸಂದರ್ಭದಲ್ಲಿ ತರಬೇತಿಯೂ ಸಾಗುತ್ತದೆ. ಐಪಿಎಲ್‌ನ
ಉಳಿದ ಪಂದ್ಯಗಳಿಗೆ ನಾನು ಲಭ್ಯನಿದ್ದೇನೆ. ಆದರೆ ನಾಯಕತ್ವದ ಬಗ್ಗೆ ಮಾಹಿತಿ ಇಲ್ಲ. ಇದು ತಂಡದ ಮಾಲಕರಿಗೆ ಬಿಟ್ಟ ವಿಚಾರ’ ಎಂದು ಅಯ್ಯರ್‌ ಹೇಳಿದ್ದಾರೆ.

ಇದನ್ನೂ ಓದಿ :ಬುಧವಾರ ಕೇಂದ್ರ ಸಂಪುಟ ವಿಸ್ತರಣೆ ಸಾಧ್ಯತೆ : ಶಾ, ಜೆ.ಪಿ.ನಡ್ಡಾ ಜೊತೆ ಪ್ರಧಾನಿ ಸಮಾಲೋಚನೆ

Advertisement

Udayavani is now on Telegram. Click here to join our channel and stay updated with the latest news.

Next