Advertisement

ಶ್ರೀ ಕ್ಷೇತ್ರ ಧ.ಗ್ರಾ.ಯೋ.: ಶ್ರೀ ಪದ್ಧತಿ ಪ್ರಾತ್ಯಕ್ಷಿಕೆ, ಮಾಹಿತಿ

08:40 PM Jul 15, 2019 | Team Udayavani |

ಹೆಬ್ರಿ: ಶ್ರೀ ಪದ್ಧತಿ ಭತ್ತ ಬೇಸಾಯದ ಕ್ರಮಗಳಾದ ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ ಮಾಡುವ ವಿಧಾನ, ಬೀಜೋಪಚಾರದ ಉಪಯೋಗ‌, ಬೀಜ ಮೊಳಕೆ ಬರಿಸುವ ವಿಧಾನ, ಸಸಿಮಡಿ ತಯಾರಿ ವಿಧಾನ, ನಾಟಿ ಗದ್ದೆ ತಯಾರಿ, ಸಸಿಗಳ ನಾಟಿಯ ವಿಧಾನ, ನೀರು ನಿರ್ವಹಣೆ, ಕಳೆ ನಿಯಂತ್ರಣ, ರಸಗೊಬ್ಬರಗಳ ಬಳಕೆ, ಕೀಟ ಮತ್ತು ರೋಗಗಳ ನಿರ್ವಹಣೆಗಳ ಬಗ್ಗೆ ತಾ| ಕೃಷಿ ಮೇಲ್ವಿಚಾರಕ ಶಶಿಕಿರಣ್‌ ಮಾಹಿತಿ ನೀಡಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ವಲಯದ ನಾಡಾ³ಲು ಒಕ್ಕೂಟದ ನೆಲ್ಲಿಕಟ್ಟೆ ನಾರಾಯಣ ಆಚಾರ್ಯ ಅವರ ಮನೆಯ ವಠಾರದಲ್ಲಿ ನಡೆದ ಶ್ರೀ ಪದ್ಧತಿ ಪ್ರಾತ್ಯಾಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಜಲಜಾ ಪೂಜಾರ್ತಿ ಅಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕ ಪ್ರವೀಣ್‌, ಸೇವಾ ಪ್ರತಿನಿಧಿ ಸಂತೋಷ್‌ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next