Advertisement

ಕುರ್ಲಾ ಪಶ್ಚಿಮದ ಶ್ರೀ ಜಾಗೃತಿ ವಿನಾಯಕ ಮಂದಿರ: ಪುಸ್ತಕ ವಿತರಣೆ

11:54 AM Jun 20, 2017 | |

ಮುಂಬಯಿ: ಕುರ್ಲಾ ಪಶ್ಚಿಮದ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಕನ್ನಡಿಗರ ಆಡಳಿತದ ಬಹುಪ್ರಸಿದ್ಧಿಯ ಶ್ರೀ ಜಾಗೃತಿ ವಿನಾಯಕ ಮಂದಿರದಲ್ಲಿ ವರ್ಷಂಪ್ರತಿಯಂತೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಮಂದಿರದ ಆವರಣದಲ್ಲಿ ಜರಗಿತು.

Advertisement

ಇದೇ ಸಂದರ್ಭದಲ್ಲಿ 15 ಸಾವಿರಕ್ಕೂ ಅಧಿಕ ನೋಟ್‌ಬುಕ್‌ಗಳನ್ನು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು. ಶ್ರೀ ಜಾಗೃತಿ ವಿನಾಯಕ ಮಂದಿರದ ಅಧ್ಯಕ್ಷ ರತ್ನಾಕರ ಶೆಟ್ಟಿ, ಗೌರವ ಕಾರ್ಯದರ್ಶಿ ಸುಧಾಕರ ಪೂಜಾರಿ, ಕೋಶಾಧಿಕಾರಿ ದಿವಾಕರ ಬಿ. ಶೆಟ್ಟಿ ಕುರ್ಲಾ, ಮಂದಿರದ ಟ್ರಸ್ಟಿಗಳಾದ ಬಾಪು ಸೇರೆ ಕೋಟ್ಕರ್‌, ಸತೀಶ್‌ ಶೆಟ್ಟಿ, ಸುಭಾಷ್‌ ಗುಪ್ತಾ, ದಿಲೀಪ್‌ ಮೊಟ್ವಾನಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಪುರೋಹಿತರಾದ ಸುಬ್ರಹ್ಮಣ್ಯ ಉಡುಪ ಮತ್ತು ಶ್ರೀನಿವಾಸ ಭಟ್‌ ಅವರು ಶ್ರೀ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆಗೈದರು. ಸ್ಥಳೀಯ ವಿದ್ಯಾರ್ಥಿಗಳು, ತುಳು-ಕನ್ನಡಿಗರು  ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next