Advertisement

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ನಾದಸ್ವರ ವಾದನ ಸೇವೆ

10:35 PM Aug 09, 2024 | Team Udayavani |

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮೀಯ ಸನ್ನಿಧಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡ ವಿಶೇಷ ಅರ್ಚನಾ ಪೂಜೆಯಲ್ಲಿ ಮೈಸೂರಿನ ನಾದಸ್ವರ ವಿದ್ವಾನ್‌ ಕೆ.ಜೆ. ನಂದನ್‌ ಮತ್ತು ಬಳಗದವರು ಸರಿಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ನಾದಸ್ವರ ವಾದನವನ್ನು ಸೇವಾ ರೂಪದಲ್ಲಿ ಪ್ರಸ್ತುತಪಡಿಸಿದರು.

Advertisement

ಭಕ್ತ ಸಮೂಹದ ಮನ ಗೆದ್ದ ಕಲಾವಿದರನ್ನು ಗಾನ ನಾದ ನಾಟ್ಯ ಪ್ರಿಯಳೆಂದು ಹೊಂದಿರುವ ಶ್ರೀ ದುರ್ಗಾ ಆದಿಶಕ್ತಿಯ ಸನ್ನಿಧಾನದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರು ಶಾಲು ಹೊದಿಸಿ ಫ‌ಲ ಪುಷ್ಪ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next