Advertisement

Shravana ಆರಂಭಕ್ಕೆ ಕ್ಷಣಗಣನೆ : ಭರ್ಜರಿ ವ್ಯಾಪಾರದ ಬೇಟೆಯಲ್ಲಿ ಹೂವು ಮಾರಾಟಗಾರರು

08:37 PM Aug 16, 2023 | Team Udayavani |

ದಾಂಡೇಲಿ : ಹಿಂದೂ ಧರ್ಮಿಯರ ಅತ್ಯಂತ ಪವಿತ್ರ ತಿಂಗಳೆಂದೆ ಕರೆಸಿಕೊಳ್ಳುವ ಶ್ರಾವಣ ಮಾಸದ ಆರಂಭಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ಶ್ರಾವಣ ಮಾಸದ ಮೊದಲ ದಿನವನ್ನು ಸ್ವಾಗತಿಸಲು ದಾಂಡೇಲಿಗರು ಸಜ್ಜಾಗಿದ್ದಾರೆ.

Advertisement

ಈ ತಿಂಗಳಿಡಿ ವಿವಿಧ ಪೂಜೆ, ಪುರಸ್ಕಾರಗಳು, ಉಡಿ ತುಂಬುವ ಕಾರ್ಯಕ್ರಮ ಹೀಗೆ ಇನ್ನಿತರ ಕಾರ್ಯಕ್ರಮಗಳು ನಗರದೆಲ್ಲೆಡೆ ನಡೆಯಲಿದೆ.

ಶ್ರಾವಣ ಮಾಸದ ಆರಂಭದ ಕ್ಷಣಗಣನೆಯಲ್ಲಿರುವ ಹಿಂದೂ ಧರ್ಮಿಯರು ಪೂಜಾ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹೂವುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ನಗರದ ಲಿಂಕ್ ರಸ್ತೆ, ಸಂಡೆ ಮಾರ್ಕೆಟ್ ನಲ್ಲಿರುವ ಹೂವಿನ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದ್ದು, ಶ್ರಾವಣ ಮಾಸ ಹೂವಿನ ವ್ಯಾಪಾರಿಗಳಿಗೆ ಅದೃಷ್ಟದ ತಿಂಗಳೆಂದೆ ಹೇಳಲಾಗುತ್ತಿರುವ ಮಾತಿಗೆ ಇಂದು ಹೂವಿನ ಅಂಗಡಿಗಳ ಮುಂದೆ ಹೂವು ಖರೀದಿಸಿಲು ಸೇರಿದ್ದ ಜನ ಸಮೂಹವೇ ಸಾಕ್ಷಿಯ ರೂಪದಲ್ಲಿ ಕಂಡುಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next